ಸರ್ಕಾರ ಯಾವುದನ್ನೂ ಮುಚ್ಚಿಡುವ ಪ್ರಶ್ನೆಯೇ ಇಲ್ಲ: ಸುಳ್ಳು ಹೇಳುವುದು ಕಾಂಗ್ರೆಸ್ ಗೆ ಕರಗತ- ಸಚಿವ ಸುಧಾಕರ್ ವಾಗ್ದಾಳಿ.

ಚಿಕ್ಕಬಳ್ಳಾಪುರ,ನವೆಂಬರ್,18,2022(www.justkannada.in):  ಸರ್ಕರದ ವಿರುದ್ಧ ವೋಟರ್ ಐಡಿ ಅಕ್ರಮ ಆರೋಪ ಮಾಡಿರುವ ಕಾಂಗ್ರೆಸ್ ನಾಯಕರ ವಿರುದ್ಧ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಇಂದು ಮಾತನಾಡಿರುವ ಸಚಿವ ಸುಧಾಕರ್,  ಸರ್ಕಾರ ಯಾವುದನ್ನು ಮುಚ್ಚಿಡುವ ಪ್ರಶ್ನೆಯೇ ಇಲ್ಲ.  ಕಾಂಗ್ರೆಸ್ ಗೆ ಸುಳ್ಳು ಆರೋಪ ಮಾಡುವುದು ಕರಗತವಾಗಿದೆ.  ತಾರ್ಕಿಕ ವಿಷಯ ಮುಂದಿಟ್ಟು ಚರ್ಚೆ ಮಾಡಲಿ  ಎಂದು ಕಿಡಿಕಾರಿದರು. august-15-number-coronavirus-infections-increase-minister-dr-k-the-reformer

ಜನರ ಎದುರು ಕಾಂಗ್ರೆಸ್ ಬೆತ್ತಲಾಗುತ್ತಿದೆ.  ಜಾತಿ ಗಣತಿಗೆ ಕಾಂಗ್ರೆಸ್  ಅವಧಿಯಲ್ಲಿ 130 ಕೋಟಿ ಖರ್ಚು ಮಾಡಿದ್ದರು. ಆ ವರದಿಯನ್ನ ‘ಕೈ’ ನಾಯಕರು ಲೀಕ್ ಮಾಡಿದರು.  ಇದುವರೆಗೆ ಜಾತಿ ಗಣತಿ ಬಿಡುಗಡೆಯಾಗಿಲ್ಲ ಎಂದು ಸುಧಾಕರ್ ಹರಿಹಾಯ್ದರು.

Key words: no question – government – Congress –Minister- Sudhakar