“ನಂಜನಗೂಡು ಕಾರ್ಯ ಸಿದ್ದೇಶ್ವರ ಬೆಟ್ಟಕ್ಕೆ ಕಿಡಿಗೇಡಿಗಳಿಂದ ಬೆಂಕಿ”

ಮೈಸೂರು,ಮಾರ್ಚ್,29,2021(www.justkannada.in) : ನಂಜನಗೂಡು ಬಳಿಯ ಕಾರ್ಯ ಸಿದ್ದೇಶ್ವರ ಬೆಟ್ಟಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಸಾವಿರಾರು ಎಕರೆ ಅರಣ್ಯ ಪ್ರದೇಶ ಸುಟ್ಟು ಭಸ್ಮವಾಗಿದೆ.

Government,Social,Economic,Educational,survey,Report,Should,receive,Former CM,Siddaramaiah 

ನಂಜನಗೂಡು ತಾಲೂಕಿನ ದೊಡ್ಡ ಕವಲಂದೆ ಹೋಬಳಿ ವ್ಯಾಪ್ತಿಯ ಕಾರ್ಯ ಗ್ರಾಮದ ಶ್ರೀ ಸಿದ್ದೇಶ್ವರ ಬೆಟ್ಟದಲ್ಲಿ ಬೆಳ್ಳಿಗೆ 11 ಗಂಟೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸುಳಿಗಾಳಿಗೆ ಅರಣ್ಯಪ್ರದೇಶವನ್ನು ವ್ಯಾಪಿಸಿದೆ.

fire-barn-crib-two-cattle-deaths-chikkamagalore

ಸಿದ್ದೇಶ್ವರ ಬೆಟ್ಟದ ಸುತ್ತಲೂ ಬೆಂಕಿ ವ್ಯಾಪಿಸಿದೆ. ಅರಣ್ಯ ಪ್ರದೇಶದಲ್ಲಿದ್ದ ಗಂಧದ ಮರ, ನೀಲಗಿರಿ ಮರಗಳು ಸೇರಿದಂತೆ ಹಲವು ಗಿಡ ಮರಗಳು ಭಸ್ಮವಾಗಿದೆ. ಬೆಂಕಿ ನಂದಿಸಲು ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಗೃಹರಕ್ಷಕ ದಳದ ಸಿಬ್ಬಂದಿ ಹರಸಾಹಸ ಪಡುವಂತ್ತಾಗಿದೆ.

key words : Njanjangudu-karya Siddheshwar-hill-bastards-Fire