ಡಬ್ಬಿಂಗ್ ಮುಗಿಸಿದ ‘ಕುರುಕ್ಷೇತ್ರ’ ಅಭಿಮನ್ಯು !

ಬೆಂಗಳೂರು, ಜುಲೈ 30, 2019 (www.justkannada.in): ‘ಕುರುಕ್ಷೇತ್ರ’ ಚಿತ್ರದ ಡಬ್ಬಿಂಗ್ ಗೊಂದಲ ಬಗೆಹರಿದಿದೆ. ನಿಖಿಲ್ ಕುಮಾರಸ್ವಾಮಿ ಡಬ್ಬಿಂಗ್ ಪೂರ್ಣಗೊಳಿಸುವ ಮೂಲಕ ಚಿತ್ರ ಬಿಡುಗಡೆ ಹಾದಿ ಸುಗಮ ಮಾಡಿದ್ದಾರೆ.

ಕುರುಕ್ಷೇತ್ರ ಚಿತ್ರದಲ್ಲಿ ಅಭಿಮನ್ಯು ಪಾತ್ರದಲ್ಲಿ ನಿಖಿಲ್ ,ಆದರೆ ಡಬ್ಬಿಂಗ್ ಕೆಲಸ ಮುಗಿದಿರಲಿಲ್ಲ. ಇದೀಗ ನಿಖಿಲ್  ತಮ್ಮಕೆಲಸವನ್ನು ಪೂರ್ಣಗೊಳಿಸಿದ್ದಾರೆ.

ಒಂದು ದೊಡ್ಡಮಟ್ಟದ ಸಿನಿಮಾ ಪ್ರೇಕ್ಷಕರ ಮುಂದೆ ಬರುತ್ತಿದೆ. ನಾನು ಧ್ವನಿಸುರುಳಿ ಬಿಡುಗಡೆ ಸಮಾರಂಭಕ್ಕೆ ನಾನಾ ಕಾರಣಗಳಿಂದ ಬರಲಾಗಲಿಲ್ಲ, ಇನ್ನು ಮುಂದೆ ಮಾಡುವ ಪ್ರಚಾರದಲ್ಲಿ ನಾನು ಕೈ ಜೋಡಿಸುತ್ತೇನೆ ಎಂದು ನಿಖಿಲ್ ಹೇಳಿದ್ದಾರೆ.