ಆರ್.ಎಸ್.ಎಸ್ ಕಚೇರಿ ಮೇಲೆ 52 ವರ್ಷ ರಾಷ್ಟ್ರಧ್ವಜ ಹಾರಿಸಿರಲಿಲ್ಲ- ಹರ್ ಘರ್ ತಿರಂಗಾ ಅಭಿಯಾನದ ಬಗ್ಗೆ ಸಿದ್ಧರಾಮಯ್ಯ ಟೀಕೆ.

ಮೈಸೂರು,ಆಗಸ್ಟ್,8,2022(www.justkannada.in): 75ನೇ ಸ್ವಾತಂತ್ರೋತ್ಸವ ಹಿನ್ನೆಲೆ ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ಹರ್ ಘರ್ ತಿರಂಗಾ ಅಭಿಯಾನದ ಬಗ್ಗೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಟೀಕಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿರುವ ಮಾಜಿ ಸಿಎಂ ಸಿದ್ಧರಾಮಯ್ಯ, ಆರ ಎಸ್ ಎಸ್ ಕಚೇರಿಯ ಮೇಲೆ 52 ವರ್ಷ ರಾಷ್ಟ್ರಧ್ವಜ ಹಾರಿಸಿರಲಿಲ್ಲ. ಭಾಗವಧ್ವಜ ಬಾವುಟ ಆರಿಸಿದ್ದರು. ಕೈ ಮುಗಿದು ಪ್ರಾರ್ಥನೆ ಮಾಡ್ತೀನಿ. ಆರ್ ಎಸ್ ಎಸ್ , ಬಿಜೆಪಿ ಯವರು ಎಂದೂ ನಿಮ್ಮ ಪರ ಇರಲ್ಲ ಎಚ್ಚರವಾಗಿರಿ ದಯಮಾಡಿ ನಾಗರೀಕರೇ ಎಂದು ಮನವಿ ಮಾಡಿದರು.

76 ನೇ ಸ್ವಾತಂತ್ರ್ಯೋತ್ಸವ ವರ್ಷಕ್ಕೆ ಕಾಲಿಡುತ್ತಿದ್ದೇವೆ. ಈ ಹಿನ್ನೆಲೆ ಕಾಂಗ್ರೆಸ್ ಪಕ್ಷದಿಂದ ಎಲ್ಲಾ ಕಡೆ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಬ್ರಿಟಿಷರನ್ನ ತೊಲಗಿಸಿ ಸ್ವಾತಂತ್ರ್ಯದಲ್ಲಿ ಹೋರಾಡಿದ್ದು ಕಾಂಗ್ರೆಸ್. ಬಿಜೆಪಿ, ಆರ್ ಎಸ್ ಎಸ್ ಹೋರಾಟ ನಡೆಸಿಲ್ಲ. 1885 ರಲ್ಲಿ ಕಾಂಗ್ರೆಸ್ ಸ್ಥಾಪನೆ ಆಗಿದೆ. ಅಲ್ಲಿಂದ ಇಲ್ಲಿಯವರೆಗೆ ದೇಶದ ಒಳಿತಿಗಾಗಿ ಕಾಂಗ್ರೆಸ್ ಕೆಲಸ ಮಾಡಿದೆ. ಕಾಂಗ್ರೆಸ್ ಪಕ್ಷ ಬ್ರಿಟಿಷರನ್ನ ಓಡಿಸಲು ಹೋರಾಟ ನಡೆಸಿದೆ ಎಂದರು.

ಸಾವರ್ಕರ್ ಅಂತ ಒಬ್ಬರು ಇದ್ದರು. ಅವರನ್ನ ಜೈಲಿಗೆ ಹಾಕಿದ್ದರು. ಆ ವೇಳೆ ಸಾವರ್ಕರ್ ಅವರು ಮುಚ್ಚಳಿಕೆ ಬರೆದುಕೊಟ್ರು. ನಿಮ್ಮ ದಮ್ಮಯ್ಯ ಅಂತೀನಿ ಬಿಟ್ಟುಬಿಡಿ ಎಂದು ಪತ್ರ ಬರೆದಿದ್ದರು. ಅವರನ್ನ ಈಗ ಬಿಜೆಪಿಯವರು ವೀರ ಸಾವರ್ಕರ್ ಅಂತಾರೆ. ಈಗ ಘರ್ ಘರ್ ತಿರಂಗ… ಎಂಥ ನಾಟಕ ಮಾಡ್ತಾರೆ. ಹೋವಲ್ಕರ್ ಬಿಜೆಪಿ ಪತ್ರಿಕೆ ಆರ್ಗನೈಸ್ ಇತ್ತು. ಅದು ತ್ರಿವರ್ಣ ಧ್ವಜವನ್ನ ಎಂದು ಗೌರವಿಸಬೇಡಿ ಎಂದಿದ್ದರು. ಅದರಲ್ಲಿರುವ ಮೂರು ಬಣ್ಣಗಳ ಬಗ್ಗೆ ಕೆಟ್ಟದಾಗಿ ಬರೆದಿದ್ದರು. ಈಗ ಹೇಳಿ ನಿಮಗೆ ನಾಚಿಕೆ ಆಗಲ್ವಾ ಮೋದಿ ಎಂದು ಸಿದ್ಧರಾಮಯ್ಯ ಕಿಡಿಕಾರಿದರು.

Key words: national flag- not -hoisted – RSS-Siddaramaiah –criticizes