ಮಾಟಮಂತ್ರದಿಂದಾಗಿ ನನ್ನ ಪತ್ನಿ ಬದಲಾಗಿದ್ದಾರೆ : ಕೆ.ಕಲ್ಯಾಣ ಆರೋಪ

kannada t-shirts

ಬೆಳಗಾವಿ,ಅಕ್ಟೊಂಬರ್,04,2020(www,justkannada.in) : ನನ್ನ ಪತ್ನಿ ತುಂಬಾ ಒಳ್ಳೆಯವರು. ಮಾಟಮಂತ್ರದಿಂದಾಗಿ ಅವರು ಬದಲಾಗಿದ್ದಾರೆ. ಮಾಟಮಂತ್ರ ಮಾಡಿರುವ ಗಂಗಾ ಮತ್ತು ಶಿವಾನಂದ ವಾಲಿ ದೂರು ದಾಖಲಿಸುತ್ತೇನೆ ಎಂದು ಚಿತ್ರಸಾಹಿತಿ ಕೆ.ಕಲ್ಯಾಣ್ ಆರೋಪಿಸಿದರು.jk-logo-justkannada-logoನಮ್ಮ ಮದುವೆಯಾಗಿ 15 ವರ್ಷವಾಗಿದೆ. ನನ್ನ ಪತ್ನಿ ಅಶ್ವಿನಿ ತುಂಬಾ ಒಳ್ಳೆಯವರು. ಮನೆಕೆಲಸಕ್ಕೆಂದು ಬಂದವರು ಮಾಟಮಂತ್ರ ಮಾಡುವ ಮೂಲಕ ನನ್ನ ಪತ್ನಿಯ ತಲೆ ಕೆಡಿಸಿದ್ದಾರೆ. ಇಂದು ನನ್ನ ಪತ್ನಿ ಅಪರಿಚಿತವ್ಯಕ್ತಿಯಂತೆ ಮಾತಾಡಿಸುತ್ತಿದ್ದಾರೆ ಎಂದು ಬೇಸರವ್ಯಕ್ತಪಡಿಸಿದ್ದಾರೆ.

y-wife-changed-due witchcraft-K.kalyan-allegation

ನಮ್ಮಿಬ್ಬರಲ್ಲಿ ಯಾವುದೇ ಗೊಂದಲವಿಲ್ಲ. ನನ್ನ ಪತ್ನಿಯ ಖಾತೆಯಿಂದ ಹಣ ವರ್ಗಾವಣೆಯಾಗಿದೆ. ದಾಂಪತ್ಯ ಕಲಹದ ಹಿಂದೆ ಯಾರದೋ ಕೈವಾಡವಿದೆ ಎಂದು ದೂರಿದ್ದಾರೆ.

key words : My-wife-changed-due witchcraft-K.kalyan-allegation

website developers in mysore