ಗಂಡನ ಆಸ್ತಿಗಾಗಿ ಹೋರಾಡಿ ಬೇಸತ್ತು ವಿಧವೆ ಆತ್ಮಹತ್ಯೆಗೆ ಶರಣು…

ಮೈಸೂರು,ಜು,29,2019(www.justkannada.in):  ಗಂಡನ ಆಸ್ತಿಗಾಗಿ ಹೋರಾಡಿ ಬೇಸತ್ತ ವಿಧವೆ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಉದಯಗಿರಿಯ ಕಲ್ಯಾಣಗಿರಿ ನಗರದಲ್ಲಿ ಈ ಘಟನೆ ನಡೆದಿದೆ. ಶಬರೀನ್ ಬಾನು(31)ಮೃತ ವಿಧವೆ. 15 ವರ್ಷಗಳ ಹಿಂದೆ ಸೈಯದ್ ಅಜಮದ್  ಆಲಿ ಎಂಬಾತನನ್ನ ಶಬರೀನ್ ಬಾನು ಮದುವೆ ಆಗಿದ್ದರು. ಆದರೆ ಸೈಯದ್ ಅಜಮದ್ ಆಲಿ ಕಳೆದ 8 ವರ್ಷದ ಹಿಂದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಈ ನಡುವೆ ಪತಿ ಸಾವನ್ನಪ್ಪಿದ ನಂತರ ಕೆಲಸಕ್ಕಾಗಿ  ಶಬರೀನ್ ಬಾನು ದುಬೈಗೆ ತೆರಳಿದ್ದರು. ದುಬೈನಲ್ಲಿ  ಮೂರು ವರ್ಷ ಕೆಲಸ ಮಾಡಿ ಮೂರು ವರ್ಷದ ಹಿಂದೆ ತಾಯ್ನಾಡಿಗೆ ಶಬರೀನ್ ಬಾನು ವಾಪಾಸ್ ಬಂದಿದ್ದರು.

ಇನ್ನು ಶಬರೀನ್ ಬಾನುಗೆ ಬೆಂಗಳೂರಿನ ಯಶವಂತಪುರದಲ್ಲಿ ಗಂಡನಿಗೆ ಸೇರಿದ ಆಸ್ತಿ ಇದೆ. ಗಂಡನ ಆಸ್ತಿಗಾಗಿ ಅಲೆದಾಡಿ ಶಬರೀನ್ ಬಾನು. ಬೇಸತ್ತಿದ್ದರು. ಜತೆಗೆ ಇಬ್ಬರು ಮಕ್ಕಳ ವಿಧ್ಯಾಭ್ಯಾಸಕ್ಕಾಗಿ ತೀವ್ರ ಸಂಕಷ್ಟ ಎದುರಿಸಿದ್ದರು. ಹೀಗಾಗಿ ಮಕ್ಕಳ ಭವಿಷ್ಯ ರೂಪಿಸಲು ಸಾಧ್ಯವಾಗದ ಹಿನ್ನಲೆ ನಿನ್ನೆ ತಡರಾತ್ರಿ ಶಬರೀನ್ ಬಾನು ನೇಣಿಗೆ ಶರಣಾಗಿದ್ದಾರೆ. ಈ ಕುರಿತು ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: mysore-widow – her husband’s- property – commits- suicide.