ಚುನಾವಣೆಗೆ ನಿಲ್ಲಬೇಡಿ ಎಂದಿದ್ದು ನಿಜ: ಆದ್ರೆ ಯಾರಾದ್ರೂ ಕ್ಷೇತ್ರ ಬಿಟ್ಟು ಕೊಡ್ತಾರಾ..?-ಶಾಸಕ ಎಸ್.ಟಿ ಸೋಮಶೇಖರ್ ಗೆ ಹೆಚ್.ವಿಶ್ವನಾಥ್ ತಿರುಗೇಟು…

ಮೈಸೂರು,ಜ,25,2020(www.justkannada.in):  ಚುನಾವಣೆಗೆ ನಿಲ್ಲಬೇಡಿ ಎಂದು ಹೇಳಿದ್ದು ನಿಜ. ಆದರೇ ಯಾರಾದ್ರೂ ಕ್ಷೇತ್ರ ಬಿಟ್ಟು ಕೊಡ್ತಾರಾ..? ಎಂದು ಶಾಸಕ ಎಸ್.ಟಿ ಸೋಮಶೇಖರ್ ಗೆ ಮಾಜಿ ಸಚಿವ ಹೆಚ್.ವಿಶ್ವನಾಥ್ ತಿರುಗೇಟು ನೀಡಿದರು.

ಮೈಸೂರಿನ ಸುತ್ತೂರಿನಲ್ಲಿ ಇಂದು ಶಾಸಕ ಎಸ್.ಟಿ ಸೋಮಶೇಖರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ಸಿಎಂ ಬಿಎಸ್ ವೈ ಚುನಾವಣೆಗೆ ನಿಲ್ಲಬೇಡಿ ಅಂದಿದ್ದು ನಿಜ.ಆದ್ರೆ ಯಾರಾದ್ರೂ ಕ್ಷೇತ್ರ ಬಿಟ್ಟು ಕೊಡ್ತಾರಾ…? ಈಗ ನಾನು ಪಕ್ಷ ಸಂಘಟಿಸಿ ಉಪಚುನಾವಣೆಯಲ್ಲಿ 52 ಸಾವಿರ ಮತಗಳನ್ನ ಪಡೆದುಕೊಂಡಿದ್ದೇನೆ. ಈ ಹಿಂದೆ ಎಸ್.ಟಿ ಸೋಮಶೇಖರ್ ಮೈಸೂರಿಗೆ ಬಂದಾಗ ಹೆಚ್ ವಿಶ್ವನಾಥ್ ನಮ್ಮ ನಾಯಕ ಅಂದಿದ್ರು. ಈಗ ನಾವು ಒಗ್ಗಟ್ಟಾಗೇ ಇದ್ದೇವೆ. ಸೋಮಶೇಖರ್ ಹೇಳಿದಂತೆ ಒಟ್ಟಿಗೆ ಸೇರಬಾರದೆಂದು ಇಲ್ಲ ಎಂದು ಟಾಂಗ್ ನೀಡಿದರು.

ಇನ್ನು ನಾಲಿಗೆ ಮೇಲೆ ನಿಲ್ಲುವ ನಾಯಕ ಅಂದ್ರೆ ಅದು ಬಿಎಸ್  ಯಡಿಯೂರಪ್ಪ. ಅವರು ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆ. ಎಲ್ಲರಿಗೂ ಸ್ಥಾನಮಾನ ಕೊಡಡುತ್ತಾರೆ ಎಂದು ಹೆಚ್.ವಿಶ್ವನಾಥ್ ವಿಶ್ವಾಸ ವ್ಯಕ್ತಪಡಿಸಿದರು.

ಉಪಚುನಾವಣೆಯಲ್ಲಿ ಸೋತವರಿಗೆ ಈ ಹಿಂದೆಯೇ ಚುನಾವಣೆಗೆ ನಿಲ್ಲವುದು ಬೇಡ ಅಂತಾ ಸಿಎಂ ಬಿಎಸ್ ವೈ  ಹೇಳಿದ್ರು. ಅದರೂ ಕೆಲವರು ಮುಖ್ಯಮಂತ್ರಿಗಳ ಮಾತು ಕೇಳದೇ ಚುನಾವಣೆ ಗೆ ಸ್ಪರ್ಧೆ ಮಾಡಿದ್ರು. ಹೀಗಾಗಿ ಸೋತವರಿಗೆ ಸಚಿವ ಸ್ಥಾನ ನೀಡುವುದು ಸಿಎಂ ಪರಮಾಧಿಕಾರವಾಗಿದೆ ಎಂದು ಶಾಶಕ ಎಸ್.ಟಿ ಸೋಮಶೇಖರ್ ಚಾಟಿ ಬೀಸಿದ್ದರು.

Key words: mysore-suttur-H.Vishwanath-tong-MLA-ST Somashekar