ತಡೆಹಿಡಿದ ಅನುದಾನ ಬಿಡುಗಡೆಯಾಗುವವರೆಗೂ ಯಾವುದೇ ಸಭೆಗಳಿಗೆ ಭಾಗಿಯಾಗಲ್ಲ- ಸಚಿವ ಸೋಮಣ್ಣಗೆ ಸಾ.ರಾ ಮಹೇಶ್ ಬಹಿರಂಗ ಪತ್ರ…

ಮೈಸೂರು,ಜ,3,2019(www.justkannada.in): ತಡೆಹಿಡಿದ ಅನುದಾನ ಬಿಡುಗಡೆಯಾಗುವವರೆಗೂ ಯಾವುದೇ ಸಭೆಗಳಿಗೆ ಭಾಗಿಯಾಗುವುದಿಲ್ಲ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರಿಗೆ ಕೆ.ಆರ್ ನಗರ ಶಾಸಕ ಸಾ.ರಾ ಮಹೇಶ್ ಬಹಿರಂಗ ಪತ್ರ ಬರೆದಿದ್ದಾರೆ.mysore-sa-ra-mahesh-letter-minister-somanna-grant-released

ಇಂದು ಉಸ್ತುವಾರಿ ಸಚಿವ ವಿ.ಸೋಮಣ್ಣ ನೇತೃತ್ವದಲ್ಲಿ ನಡೆದ ಕೆಡಿಪಿ ಸಭೆಗೆ ಶಾಸಕ ಸಾರಾ ಮಹೇಶ್ ಗೈರಾಗಿದ್ದರು.  ಈ  ಸಂಬಂಧ ಸಚಿವ ವಿ.ಸೋಮಣ್ಣಗೆ ಪತ್ರ ಬರೆದಿರುವ ಮಾಜಿ ಸಚಿವ ಸಾ.ರಾ ಮಹೇಶ್,  ಮೈತ್ರಿ ಸರ್ಕಾರದಲ್ಲಿ ಕೆ.ಆರ್ ನಗರ ಕ್ಷೇತ್ರಕ್ಕೆ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ 7 ಕೋಟಿ, ಪೌರಾಡಳಿತ ಇಲಾಖೆಯಿಂದ 10ಕೋಟಿ, ಲೋಕೋಪಯೋಗಿ ಇಲಾಖೆಯಿಂದ 11.50ಕೋಟಿ, ಪ್ರವಾಸೋದ್ಯಮ ಇಲಾಖೆಯಿಂದ 18 ಕೋಟಿ ಅನುದಾನವನ್ನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಂಜೂರು ಮಾಡಲಾಗಿತ್ತು. ಆದ್ರೆ ಬಿಜೆಪಿ ಸರ್ಕಾರ ಅನುದಾನಗಳೆಲ್ಲವನ್ನೂ ತಡೆಹಿಡಿದಿದ್ದು, ದ್ವೇಷದ ರಾಜಕಾರಣ ಮಾಡ್ತಿದೆ. ಹಿಂದೆ ನಿಮಗೆ ಪತ್ರ ಮೂಲಕ ಈ ಬಗ್ಗೆ ತಿಳಿಸಿ ಮೈಸೂರು ದಸರಾ ಕಾರ್ಯಕ್ರಮದಿಂದ ದೂರ ಉಳಿದಿದ್ದೆ. ಅನುದಾನ ತಡೆಹಿಡಿದ ವಿಚಾರ ನಿಮ್ಮ ಗಮನಕ್ಕೆ ಬಂದರೂ ಯಾವದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ‌ ಪ್ರಸ್ತುತ ಕೆಡಿಪಿ ಸಭೆಯಲ್ಲಿ ಭಾಗಿಯಾಗಿ ಅದೇ ವಿಚಾರ ಚರ್ಚೆ ಮಾಡಿ ನಿಮಗೆ ನೋವುಂಟು ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.mysore-sa-ra-mahesh-letter-minister-somanna-grant-released

ಈ ಕಾರಣಕ್ಕಾಗಿಯೇ ನಾನು ಈ ಸಭೆಯಿಂದ ದೂರ ಉಳಿದಿದ್ದು ಅನುದಾನ ಬಿಡುಗಡೆಗೊಳಿಸುವವರೆಗೆ ಯಾವದೇ ಸಭೆಗೆ ಹಾಜರಾಗುವುದಿಲ್ಲ ಎಂದು  ಸಾ.ರಾ ಮಹೇಶ್ ಪತ್ರದ ಮೂಲಕ ಸಚಿವ ಸೋಮಣ್ಣಗೆ ತಿಳಿಸಿದ್ದಾರೆ.

key words: mysore-.sa. Ra Mahesh-letter – Minister Somanna- grant -released.