ಕರೋನಾ ಬಳಿಕ ಮೊದಲ ನಾಟಕ ಪರ್ವಕ್ಕೆ ಅನುದಾನ ವಿಚಾರ: 50 ಲಕ್ಷ ಬಿಡುಗಡೆಗೆ ಅನುಮೋದನೆ ನೀಡಿದ್ದೇನೆ- ಸಚಿವ ಅರವಿಂದ ಲಿಂಬಾವಳಿ…

ಮೈಸೂರು,ಫೆಬ್ರವರಿ,18,2021(www.justkannada.in)  ಮೈಸೂರಿನ ರಂಗಾಯಣಕ್ಕೆ ಅರಣ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಭೇಟಿ ನೀಡಿ ವಿದ್ಯಾರ್ಥಿಗಳಿಂದ ಕೋಲಾಟ ವೀಕ್ಷಣೆ ಮಾಡಿದರು.jk

ಮೈಸೂರು ಪ್ರವಾಸದಲ್ಲಿರುವ ಸಚಿವ ಅರವಿಂದ ಲಿಂಬಾವಳಿ ಇಂದು ರಂಗಾಯಣಕ್ಕೆ ಭೇಟಿ ನೀಡಿದರು. ಈ ವೇಳೆ ರಂಗಾಯಣದ ವಿದ್ಯಾರ್ಥಿಗಳ ಕೋಲಾಟ ವೀಕ್ಷಿಸಿದರು.

ನಂತರ ಕರೋನಾ ಬಳಿಕ ಮೊದಲ ನಾಟಕ ಪರ್ವಕ್ಕೆ ಅನುದಾನ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಅರವಿಂದ ಲಿಂಬಾವಳಿ, 50 ಲಕ್ಷ ಬಿಡುಗಡೆಗೆ ಅನುಮೋದನೆ ನೀಡಿದ್ದೇನೆ. ಶೀಘ್ರದಲ್ಲೇ ಅವರಿಗೆ ಅನುದಾನ ಬಂದು ಸೇರಲಿದೆ‌. ಈ ಬಾರಿಯ ಬಜೆಟ್‌ನಲ್ಲಿ ಇದಕ್ಕೆ ಅನುದಾನ ಸಿಗಲಿದೆ. ರಂಗಾಯಣ ರಾಜ್ಯವಲ್ಲ, ದೇಶದಲ್ಲು ಹೆಸರುವಾಸಿಯಾಗಿದೆ ಎಂದರು.

ಪರ್ವ ನಾಟಕದ ದಿನಾಂಕದ ಮಾಹಿತಿ ಪಡೆದುಕೊಳ್ಳುತ್ತೇನೆ. ಸಿಎಂ ಯಡಿಯೂರಪ್ಪ ಅವರನ್ನ ನಾಟಕ ಪ್ರದರ್ಶ‌ನಕ್ಕೆ ಕರೆತರುವ ವಿಚಾರದ ಬಗ್ಗೆಯು ಚರ್ಚೆ ಮಾಡುತ್ತೇನೆ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದರು.

Key words:  mysore- rangayana- minister- aravinda limbavali