ಪೌರ ಕಾರ್ಮಿಕರಿಗೆ ಬೆಳಗಿನ ಉಪಹಾರ ವಿತರಣೆ ಕಾರ್ಯಕ್ರಮಕ್ಕೆ ಮೇಯರ್ ಪುಷ್ಪಲತಾ ಜಗನ್ನಾಥ್ ಚಾಲನೆ…

ಮೈಸೂರು,ನ,15,2019(www.justkannada.in): ಪೌರ ಕಾರ್ಮಿಕರಿಗೆ ಬೆಳಗಿನ ಉಪಹಾರ ವಿತರಣೆ ಕಾರ್ಯಕ್ರಮಕ್ಕೆ ಮೈಸೂರು ಮಹಾನಗರ ಪಾಲಿಕೆ ಮೇಯರ್ ಪುಷ್ಪಲತಾ ಜಗನ್ನಾಥ್ ಚಾಲನೆ ನೀಡಿದರು.

ಮೈಸೂರು ಮಹಾನಗರ ಪಾಲಿಕೆಯಿಂದ ಪೌರ ಕಾರ್ಮಿಕರಿಗೆ  ಬೆಳಗಿನ ಉಪಹಾರ ವಿತರಣೆ ಮಾಡಲಾಗುತ್ತದೆ. ಇಂದಿನಿಂದ ಮೈಸೂರಿನ  65ವಾರ್ಡ್ ಗಳಲ್ಲೂ ಪೌರಕಾರ್ಮಿಕರಿಗೆ ಉಪಹಾರ ನೀಡಲಾಗುತ್ತದೆ. ಹೈದರಾಬಾದ್ ಮೂಲದ ಸಂಸ್ಥೆಗೆ ಒಂದು ವರ್ಷದ ಅವಧಿಗೆ 1.83ಕೋಟಿ ವೆಚ್ಚಕ್ಕೆ ಉಪಹಾರದ ಟೆಂಡರ್  ನೀಡಲಾಗಿದೆ.

ಇಂದು ಮೈಸೂರು ಮಹಾನಗರ ಪಾಲಿಕೆ ವಾರ್ಡ್ ನಂ.11ರಲ್ಲಿ ಉಪಹಾರ ವಿತರಣಾ ಕಾರ್ಯಕ್ರಮಕ್ಕೆ ಮೇಯರ್ ಪುಷ್ಪಲತಾ ಜಗನ್ನಾಥ್  ಚಾಲನೆ ನೀಡಿದರು.

Key words: mysore- Mayor -Pushpalata Jagannath – breakfast – program -civilian workers