ಮೈಸೂರಲ್ಲಿ ‘ಮಾಸ್ಕ್ ‘ ವಿತರಿಸುವ ಮೂಲಕ ಮಹಾವೀರ ಜಯಂತಿ ಆಚರಣೆ.

 

ಮೈಸೂರು, ಏ.25, 2021 : (www.justkannada.in news) ಮಹಾವೀರ ತೀರ್ಥಂಕರರ ಜಯಂತಿ ಹಿನ್ನೆಲೆ, ದಿಗಂಬರ ಜೈನ ಸಮಾಜದ ವತಿಯಿಂದ ಮಹಾವೀರರ ಭಾವಚಿತ್ರಕ್ಕೆ ಪುಷ್ಪಾರ್ಚನೆ.
ನಗರದ ಟೌನ್ ಹಾಲ್ ಬಳಿ ಮಹಾವೀರರ ಭಾವಚಿತ್ರವಿಟ್ಟು ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಸ್ಮರಣೆ. ಕೊರೊನಾ ಹಿನ್ನೆಲೆಯಲ್ಲಿ ಸರಳ ಹಾಗೂ ಸಾಂಕೇತಿಕವಾಗಿ ಆಚರಣೆ.

mysore-mahaveera-jayanthi-celebration-mask-distribution

ನಗರದಲ್ಲಿ ಕೊರೊನಾ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ದಿಗಂಬರ ಜೈನ ಸಮಾಜದಿಂದ ಸಾರ್ವಜನಿಕರಿಗೆ ಮಾಸ್ಕ್ ವಿತರಣೆ. ಬೀದಿ ಬದಿ ವ್ಯಾಪಾರಿಗಳಿಗೆ ಮಾಸ್ಕ್ ವಿತರಿಸಿ ಕೊರೊನಾ ಕುರಿತು ಅರಿವು ಮೂಡಿಸಿದ ಸಮಾಜದ ಮುಖಂಡರು. ಕಾರ್ಯಕ್ರಮದಲ್ಲಿ  ಸುನೀಲ್ ಕುಮಾರ್, ಸರ್ವೇಶ್ ಪದ್ಮರಾಜ್, ಸುರೇಶ್ ಜೈನ್, ಡಿ.ಪ್ರೇಮಚಂದ್ ಹಾಜರಿದ್ದರು.

 

key words : mysore-mahaveera-jayanthi-celebration-mask-distribution