ಮಾಜಿ‌ ಮೇಯರ್ ಎಂ.ಜೆ.ರವಿಕುಮಾರ್ ನೇತೃತ್ವದಲ್ಲಿ ಮೈಸೂರಿನ 41ನೇ ವಾರ್ಡಿನಲ್ಲಿ ದಿನಸಿ ಕಿಟ್ ವಿತರಣೆ.

 

ಮೈಸೂರು, ಮೇ 09, 2020 : (www.justkannada.in news ) ನಗರದ ಚಾಮರಾಜ ವಿಧಾನಸಭಾ ಕ್ಷೇತ್ರದ ಜಾತ್ಯಾತೀತ ಜನತಾದಳ ವತಿಯಿಂದ ನಗರಪಾಲಿಕೆಯ ೪೧ನೇ ವಾರ್ಡಿನಲ್ಲಿ ಶನಿವಾರ ದಿನನಿತ್ಯದ ದಿನಸಿ ಕಿಟ್ ಗಳನ್ನು ವಿತರಿಸಲಾಯಿತು.

ನಗರದ ಆಯುರ್ವೇದ ಸರ್ಕಲ್‌ ಬಳಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಎಂ.ಜೆ.ರವಿಕುಮಾರ್, ನಗರಪಾಲಿಕೆ ಸದಸ್ಯ ನಾಗರಾಜು ಅವರು ಈ ದಿನಸಿ ಕಿಟ್ ಗಳನ್ನು ವಿತರಿಸಿದರು.

mysore-jds-covid-food-kit-mayor-ravikumar

ಈ ಸಂದರ್ಭದಲ್ಲಿ ಮಾತನಾಡಿದ ರವಿಕುಮಾರ್, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮಾರ್ಗದರ್ಶನದಂತೆ ಚಾಮರಾಜ ಕ್ಷೇತ್ರದ ಪ್ರತಿಯೊಂದು ಮನೆಗೆ ಪಡಿತರ ಕಿಟ್ ಗಳನ್ನು ವಿತರಣೆ ಮಾಡಲಾಗುತ್ತದೆ. ಇಂದು ನಲವತ್ತೊಂದನೆ ವಾರ್ಡ್ ವ್ಯಾಪ್ತಿಯ ಎಲ್ಲಾ ಮನೆಗೆ ಕೊಡಲಾಗುವುದು. ಮಾಜಿ ಸಿಎಂ ಕುಮಾರಸ್ವಾಮಿ ಅವರು, ಹಸಿವಿದವರಿಗೆ ನೆರವಾಗಬೇಕು ಎಂದು ಹೇಳಿದ್ದಾರೆ. ಅದರಂತೆ ನಾವು ಬಡವರ ಹಸಿವು ನೀಗಿಸಲಿದ್ದೇವೆ ಎಂದರು.

ಪಾಲಿಕೆ ಸದಸ್ಯ ನಾಗರಾಜು ಮಾತನಾಡಿ,ತಮ್ಮ ವಾರ್ಡ್ ವ್ಯಾಪ್ತಿಯಲ್ಲಿನ ಎಲ್ಲಾ ಮನೆಗೆ ನಿತ್ಯ ಬಳಕೆಯ ದಿನಸಿ ಕಿಟ್ ವಿತರಿಸುತ್ತೇವೆ. ಪ್ರತಿಮನೆಗೆ ಟೋಕನ್ ಕೊಡಲಾಗಿದೆ, ಅವರವರ ಮನೆಗೆ ತೆರಳಿ ಟೋಕನ್ ಪಡೆದುಕೊಂಡು ಕಿಟ್ ನೀಡಲಾಗುತ್ತದೆ. ಇದಕ್ಕಾಗಿ ಹತ್ತು ತಂಡಗಳನ್ನು ಮಾಡಿದ್ದು ಇವರು ಏಕಕಾಲದಲ್ಲಿ ವಾರ್ಡ್ ನ ಜನತೆಗೆ ಕಿಟ್ ವಿತರಿಸುವರು ಎಂದರು.

mysore-jds-covid-food-kit-mayor-ravikumar

 

key words : mysore-jds-covid-food-kit-mayor-ravikumar