ಕಾಲು ಜಾರಿ ಕೆರೆಗೆ ಬಿದ್ದು ತಂದೆ ಮಗ ಸಾವು…

ಮೈಸೂರು,ಜು,24,2020(www.justkannada,in): ಜಾನುವಾರು ತೊಳೆಯಲು ಹೋಗಿ ಕಾಲುಜಾರಿ ಕೆರೆಗೆ ಬಿದ್ದು ತಂದೆ ಮಗ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಕೆ.ಆರ್ ನಗರ ತಾಲ್ಲೂಕಿನ ಮೂಲೆಪೆಟ್ಲು ಗ್ರಾಮದಲ್ಲಿ ನಡೆದಿದೆ.mysore- father-son-death-water

ತಂದೆ ಸುರೇಶ್(45), ಪುತ್ರ ವಿಕಾಶ್(16) ಮೃತಪಟ್ಟವರು. ಸುರೇಶ್ ಹಾಗೂ ಪುತ್ರ ವಿಕಾಶ್ ಇಬ್ಬರು ಜಾನುವಾರು ತೊಳೆಯಲು ಕೆರೆಗೆ ಹೋಗಿದ್ದರು. ಈ ವೇಳೆ ಕಾಲು ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾರೆ.  ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ನುರಿತ ಈಜುಗಾರರ ನೆರವಿನಿಂದ ಕಾರ್ಯಾಚರಣೆ ನಡೆಸಿ ಶವಗಳನ್ನು  ಹೊರ ತೆಗೆಯಲಾಗಿದೆ.mysore- father-son-death-water

ಎರಡೂ ಶವಗಳನ್ನ ಪೊಲೀಸರು ವಾರಸುದಾರರಿಗೆ ಒಪ್ಪಿಸಿದ್ದು ಈ ಕುರಿತು ಕೆ.ಆರ್.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.mysore- father-son-death-water

Key words: mysore- father-son-death-water