ನಾವೇನು ಮಾರಾಟಕ್ಕಿರುವ ವಸ್ತುವೇನ್ರಿ..? ಸಾ.ರಾ ವಿರುದ್ದ ಕೆಂಡಾಮಂಡಲ- ಚಾಮುಂಡಿ ಬೆಟ್ಟಕ್ಕೆ ಬರುವಂತೆ ಮತ್ತೆ ಸವಾಲು ಹಾಕಿದ ಹೆಚ್.ವಿಶ್ವನಾಥ್

ಮೈಸೂರು,ಅ,16,2019(www.justkannada.in):  ವಿಶ್ವನಾಥ್ ಹಣಕ್ಕೆ ಮಾರಿಕೊಂಡಿದ್ದಾರೆ ಎಂದು ಆರೋಪಿಸಿರುವ ಮಾಜಿ ಸಚಿವ ಸಾ.ರಾ.ಮಹೇಶ್ ಗೆ  ಅನರ್ಹ ಶಾಸಕ ಹೆಚ್.ವಿಶ್ವನಾಥ್ ಮತ್ತೊಮ್ಮೆ ಸವಾಲು ಹಾಕಿದ್ದಾರೆ.

25 ಕೋಟಿಗೆ ನನ್ನನ್ನು ಮಾರಿಕೊಂಡಿದ್ದಾರೆ ಅಂತ ಸಾ.ರಾ.ಮಹೇಶ್ ಹೇಳಿದ್ದಾರೆ. ನಾಳೆ ಸಾ.ರಾ.ಮಹೇಶ್ ಜೊತೆ ನನ್ನನ್ನ ಕೊಂಡುಕೊಂಡವನು ಚಾಮುಂಡಿ ಬೆಟ್ಟಕ್ಕೆ ಬರಬೇಕು. ಇಲ್ಲವಾದಲ್ಲಿ ಅವರು ಮಾಡಿರುವ ಆರೋಪ ಸುಳ್ಳು ಅಷ್ಟೇ ಎಂದು ಹೆಚ್.ವಿಶ್ವನಾಥ್ ಹೇಳಿದ್ದಾರೆ.

ಮೈಸೂರಿನಲ್ಲಿ ಈ ಬಗ್ಗೆ ಇಂದು ಮಾತನಾಡಿದ ಹೆಚ್.ವಿಶ್ವನಾಥ್,  ನಾಳೆ ನಾನು ಚಾಮುಂಡಿಬೆಟ್ಟಕ್ಕೆ ಹೋಗ್ತೇನೆ. ಸಾ.ರಾ.ಮಹೇಶ್ ಜೊತೆಗೆ ನಾಳೆ ಬೆಟ್ಟಕ್ಕೆ ಅವನು ಬರಲಿ. ನನ್ನನ್ನ ಕೊಂಡುಕೊಂಡವನು ನಾಳೆ ಚಾಮುಂಡಿಬೆಟ್ಟದಲ್ಲಿ ಇರಬೇಕು. ಇಲ್ಲವಾದಲ್ಲಿ ಅವರ ಆರೋಪ ಸುಳ್ಳಾಗುತ್ತದೆ. ಅವರು ಆರೋಪ ಮಾಡಿದ್ದು ಸದನದಲ್ಲಿ. ಹಾಗಾಗಿ ಆ ವಿಚಾರಕ್ಕೆ ದೇವರ ಮುಂದೆ ಪ್ರಮಾಣ ಮಾಡಬೇಕು. ಇದರಲ್ಲಿ ಗೊಂದಲ ಉಂಟು ಮಾಡೋದು ಬೇಡ. ನಾಳೆ ನಾನು ಬೆಟ್ಟಕ್ಕೆ ಹೋಗಿ ಪೂಜೆ ಮಾಡಿಸಿ ಅವರಿಗಾಗಿ ಕಾಯುತ್ತೇನೆ.  ಅದನ್ನ ಬಿಟ್ಟರೆ ಈ ವಿಚಾರದಲ್ಲಿ ಇನ್ನೇನು ಇಲ್ಲ ಎಂದು ತಿಳಿಸಿದರು.

ಇವರಿಗೆ ಆಣೆ ಪ್ರಮಾಣ ಮಾಡಿದ್ರೆ ನಾಳೆ ಇನ್ನೊಬ್ಬ ಬಂದು ಕೇಳ್ತಾನೆ. ನಮಗೇನು ಕೆಲಸ ಇಲ್ವಾ. ಆರೋಪ‌ ಮಾಡಿದವರ ಮುಂದೆ ಹೋಗಿ  ಆಣೆ ಮಾಡೋದೆ ಕೆಲಸವಾ?  I am clear ನಾಳೆ ಸಾ.ರಾ. ಜೊತೆ ನನ್ನನ್ನ ಕೊಂಡುಕೊಂಡವನು ಬರಲಿ ಎಂದು ಹೆಚ್.ವಿಶ್ವನಾಥ್ ಮತ್ತೆ ಪುನರುಚ್ಛರಿಸಿದರು.

ನಾವೇನು ಮಾರಾಟಕ್ಕಿರೋ ವಸ್ತು ಏನ್ ರೀ..?

ಹುಣಸೂರಿನಲ್ಲಿ ವಿಶ್ವನಾಥ್ ಸ್ಪರ್ಧೆ ಮಾಡೋಲ್ಲ  ಎಂಬ ಹೇಳಿಕೆ ಕುರಿತು ಮಾಜಿ ಸಚಿವ ಎಂಬ ಸಾ.ರಾ.ಮಹೇಶ್  ವಿರುದ್ದ ಕೆಂಡಾಮಂಡಲರಾದ ಅನರ್ಹ ಶಾಸಕ ಹೆಚ್.ವಿಶ್ವನಾಥ್,  ನಾವೇನು ಮಾರಾಟಕ್ಕಿರೋ ವಸ್ತು ಏನ್ ರೀ..? ವಿಶ್ವನಾಥ್ ಟಿಕೆಟ್ ಮಾರಿಕೊಂಡಿದ್ದಾರೆ ಅಂತ ಹಬ್ಬಿಸುತ್ತಿದ್ದಾರೆ. ರಾತ್ರಿಯಿಂದ ಸಾ.ರಾ  ಮಹೇಶ್ ಮತ್ತು ಮಂಜುನಾಥ್ ಇಬ್ಬರು ಈ ವದಂತಿ ಹಬ್ಬಿಸಿದ್ದಾರೆ. ಚುನಾವಣೆ ಇರೋದ್ರಿಂದ ಅವರಿಗೆ ಅದೇ  ಕೆಲಸ ಎಂದು ಟೀಕಿಸಿದರು.

ನಾನೇನು ಟಿಕೆಟ್ ಮಾರಿಕೊಳ್ಳೋನಾ..? ನಾನೇನು ನನ್ನ‌ ಅನುಭವ ಏನು..?  ನನ್ನ ಮೇಲೆ ಸುಖ ಸುಮ್ಮನೆ ಆರೋಪ ಮಾಡೋದಾ..? ನಾನು ಕುರುಬ ಹಾಗಂತ ನನಗೆ ಹೀಗೆ ಹಿಂಸೆ ಕೊಡೋದಾ..? ನಮಗೆ ಇಂತವರಿಂದ ರಕ್ಷಣೆ ಇಲ್ಲವೇ..? ಮಾಧ್ಯಮಗಳಲ್ಲು ನಮಗೆ ರಕ್ಷಣೆ ಇಲ್ಲವೇ. ಇಂತವರ ಹೇಳಿಕೆಗಳಿಗೆ ಮನ್ನಣೆ ಕೊಡಬೇಡಿ ಎಂಧು ಮಾಧ್ಯಮಗಳಿವೆ ಹೆಚ್.ವಿ ಮನವಿ ಮಾಡಿದರು.

Key words: mysore- disqualified MLA- H.vishwanath-challange- former minister-sa.ra mahesh