ಮೈಸೂರು ಡಿಸಿ ವರ್ಗಾವಣೆ ವಿಚಾರ: ಈಗಿರುವ ಜಿಲ್ಲಾಧಿಕಾರಿಯನ್ನೇ ಉಳಿಸಿಕೊಳ್ಳುವಂತೆ ಸಿಎಂಗೆ ಮನವಿ – ಸಚಿವ ಆರ್. ಅಶೋಕ್ ಹೇಳಿಕೆ

ಮೈಸೂರು,ಆ,22,2019(www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಹತ್ತಿರವಿರುವಾಗಲೇ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜೀ ಶಂಕರ್ ವರ್ಗಾವಣೆ ಮಾಡಿರುವ  ಹಿನ್ನೆಲೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಆರ್.ಅಶೋಕ್, ಈಗಿರುವ ಜಿಲ್ಲಾಧಿಕಾರಿಗಳೇ ದಸರಾ ಕೆಲಸ ಪ್ರಾರಂಭ ಮಾಡಿದ್ದಾರೆ. ಅವರನ್ನು ಮೈಸೂರಿನಲ್ಲೇ ಉಳಿಸಿಕೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ

ಮೈಸೂರು ಜಿಲ್ಲಾಧಿಕಾರಿ ವರ್ಗಾವಣೆ ವಿಚಾರ ಕುರಿತು ಮೈಸೂರಿನಲ್ಲಿ ಮಾತನಾಡಿದ ಸಚಿವ ಆರ್ ಅಶೋಕ್, ಸ್ಥಳೀಯ ಶಾಸಕರು ಸಹ ಈಗಿರುವ ಜಿಲ್ಲಾಧಿಕಾರಿನ್ನು ಉಳಿಸಿಕೊಳ್ಳುವಂತೆ ಒತ್ತಾಯ ಮಾಡಿದ್ದಾರೆ.  ಮೈಸೂರು ಜಿಲ್ಲಾಧಿಕಾರಿ ವರ್ಗಾವಣೆ ವಿಚಾರ ಮಧ್ಯಾಹ್ನ ಮೂರುಗಂಟೆಗೆ ನನಗೆ ಗೊತ್ತಾಯ್ತು. ಈಗಿರುವ ಜಿಲ್ಲಾಧಿಕಾರಿಯನ್ನೇ ಉಳಿಸಿಕೊಳ್ಳುವಂತೆ ಸಿಎಂ ಬಿಎಸ್ ವೈ ಗೆ ಮನವಿ ಮಾಡುತ್ತೇನೆ. ಸಾಧ್ಯವಾದರೇ ಫೋನ್ ಮೂಲಕ ಇಲ್ಲವಾದರೆ ನೇರವಾಗಿ ಸಿಎಂ ಭೇಟಿಯಾಗಿ ಮಾತನಾಡುತ್ತೇನೆ ಎಂದು ಸ್ಪಷ್ಟನೆ ನೀಡಿದರು.

ಇಂದು ಮಧ್ಯಾಹ್ನವಷ್ಟೆ ಬೆಂಗಳೂರು ಕಮರ್ಷಿಯಲ್ ಟ್ಯಾಕ್ಸ್ ಎನ್ಫೂರ್ಸ್ ಎಡಿಸಿ ಆಗಿ ಅಭಿರಾಮ್ ಜಿ ಶಂಕರ್ ಅವರನ್ನ  ವರ್ಗಾವಣೆ ಆದೇಶ ಬಂದಿತ್ತು. ಅಭಿರಾಮ್ ಜಿ ಶಂಕರ್ ಸ್ಥಳಕ್ಕೆ ನಿತೇಶ್ ಪಾಟೀಲ್ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

Key words: Mysore DC- Transfer- Issue. appeals – CM-  Minister -R. Ashok