ಇಂದು ಸಂಜೆಯೊಳಗೆ ಮೈಸೂರು ಜಿಲ್ಲಾಧಿಕಾರಿ ಹುದ್ದೆಗೆ ಬಿ.ಶರತ್ ನೇಮಕ ಆದೇಶ ಸಾಧ್ಯತೆ…?

ಬೆಂಗಳೂರು ,ಡಿಸೆಂಬರ್,21, 2020(www.justkannada.in):  ಮೈಸೂರಿನ ವರ್ಗಾಯಿತ ಜಿಲ್ಲಾಧಿಕಾರಿ ಬಿ. ಶರತ್ ಮರು ನೇಮಕಕ್ಕೆ ಸಂಬಂಧಿಸಿದಂತೆ ರಾಜ್ಯಸರ್ಕಾರ ಇಂದು ಸಂಜೆಯೊಳಗೆ ಆದೇಶ ಹೊರಡಿಸಬೇಕಿದೆ.Teachers,solve,problems,Government,bound,Minister,R.Ashok

ಅವಧಿ ಮುನ್ನ ವರ್ಗಾವಣೆಯನ್ನು ಪ್ರಶ್ನಿಸಿ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಬಿ. ಶರತ್ ಸಿಎಟಿ ಮೊರೆ ಹೋಗಿದ್ದರು. ಈ ಅರ್ಜಿ ವಿಚಾರಣೆ ಸುದೀರ್ಘವಾಗಿ ನಡೆದು ಕಳೆದ ವಿಚಾರಣಾ ವೇಳೆ ರಾಜ್ಯಸರ್ಕಾರಕ್ಕೆ ಶರತ್ ಅವರನ್ನ ಡಿಸೆಂಬರ್ 22ರೊಳಗಾಗಿ ಮೈಸೂರು ಜಿಲ್ಲಾಧಿಕಾರಿಯನ್ನಾಗಿ ಮರುನೇಮಕಗೊಳಿಸಲು ಸಿಎಟಿ ಸೂಚಿಸಿತ್ತು.mysuru/former-dc-b-sharath-went-to-CAT-questioning-his-transfer

ಒಂದು ವೇಳೆ ಈ ಆದೇಶ ಪಾಲಿಸಲು ವಿಫಲವಾದಲ್ಲಿ ಸಿಎಟಿಯೇ ಶರತ್ ಅವರನ್ನ ಮೈಸೂರು ಜಿಲ್ಲಾಧಿಕಾರಿ ಹುದ್ದೆಗೆ ಮರುನೇಮಕಗೊಳಿಸಬೇಕಾಗುತ್ತದೆ ಎಂದು ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಇದೀಗ ರಾಜ್ಯ ಸರ್ಕಾರ ಸಿಎಟಿ ಆದೇಶ ಪಾಲಿಸಿ ಇಂದು ಸಂಜೆಯೊಳಗೆ ಬಿ. ಶರತ್ ಮರುನೇಮಕದ ಆದೇಶ ಹೊರಡಿಸಬೇಕಿದೆ.

Key words: mysore- DC-position- B. Sharath-appointment-govrnament-CAT