ನಾಳೆ ದಸರಾ ಉನ್ನತ ಮಟ್ಟದ ಸಭೆ: ನಾಡಹಬ್ಬ ಮೈಸೂರು ದಸರಾ ಆಚರಣೆ ಬಗ್ಗೆ ಅಂತಿಮ ನಿರ್ಧಾರ…

ಮೈಸೂರು, ಸೆಪ್ಟಂಬರ್,7,2020(www.justkannada.in): ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ ಭೀತಿ ಹೆಚ್ಚಾಗಿದ್ದು ಈ  ನಡುವೆ ನಾಳೆ ನಾಡಹಬ್ಬ ಮೈಸೂರು ದಸರಾ ಆಚರಣೆ  ಬಗ್ಗೆ ಅಂತಿಮ ನಿರ್ಧಾರ ಪ್ರಕಟವಾಗಲಿದೆ.jk-logo-justkannada-logo

ನಾಳೆ ಬೆಂಗಳೂರಿನಲ್ಲಿ  ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ದಸರಾ ಉನ್ನತ ಮಟ್ಟದ ಸಭೆ ನಡೆಯಲಿದ್ದು ಸಭೆಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು, ಮೈಸೂರು ಜಿಲ್ಲಾಧಿಕಾರಿ ಹಾಗೂ ಈ ಭಾಗದ ಜನಪ್ರತಿನಿಧಿಗಳು ಭಾಗಿಯಾಗಲಿದ್ದಾರೆ.mysore-dasara-high-level-meeting-tomorrow-final-decision-dasara-celebration

ಈ ಬಾರಿ ಮೈಸೂರು ದಸರಾ ಆಚರಣೆಯಲ್ಲಿ ಜಂಬೂಸವಾರಿ ಮೆರವಣಿಗೆ ಇರಲಿದೆಯಾ? ಅಥವಾ ದಸರಾ ಅರಮನೆಗೆ ಸೀಮಿತವಾಗಲಿದೆಯಾ? ದಸರಾ ಉದ್ಘಾಟಕರು ಯಾರು? ಈ ಬಾರಿಯ ದಸರಾ ಬಜೆಟ್‍ ಎಷ್ಟು ? ಈ ಬಾರಿಯ ದಸರಾದಲ್ಲಿ ಎಷ್ಟು ಆನೆಗಳು ಇರಬೇಕು? ಈ ಎಲ್ಲಾ ವಿಚಾರಗಳ ಬಗ್ಗೆಯೂ ನಾಳೆ ನಡೆಯುವ ಹೈಪವರ್ ಕಮಿಟಿ ಮೀಟಿಂಗ್ ನಲ್ಲಿ ತೀರ್ಮಾನವಾಗಲಿದೆ.

Key words: Mysore-Dasara -high-level -meeting –tomorrow-final decision -Dasara celebration .