ಹುಷಾರ್…! ಅಡುಗೆ ಮಾಡಲು ಹೊಸ ಸಿಲಿಂಡರ್ ಬದಲಿಸುವ ವೇಳೆ ಎಚ್ಚರ…..!

ಮೈಸೂರು,ಮಾ,2,2020(www.justkannada.in):  ಅಡುಗೆ ಮಾಡುವಾಗ ದಿಢೀರ್ ಇದ್ದಕ್ಕಿದಂತೆ ಸಿಲಿಂಡರ್ ಖಾಲಿಯಾದರೆ ಅದನ್ನ ಬದಲುಸುವ ವೇಳೆ ಎಲ್ಲರೂ ಎಚ್ಚರದಿಂದಿರಬೇಕು. ಇಲ್ಲದಿದ್ದರೇ ಅಪಾಯ ಕಟ್ಟಿಟ್ಟ ಬುತ್ತಿ. ಅಂತೆಯೇ ಸಿಲಿಂಡರ್ ಬದಲಿಸುವ ವೇಳೆ ಸಿಲಿಂಡರ್ ಹೊತ್ತಿ ಉರಿದ ಘಟನೆ ಮೈಸೂರಿನಲ್ಲಿ ನಡೆದಿದೆ.mysore-cylinder-change-cooking-blast

ಮೈಸೂರಿನ ಕ್ಯಾತನಾರನಹಳ್ಳಿ  ಗಾಯತ್ರಿಪುರಂ 2ನೇ ಹಂತದ 7ನೇ ಕ್ರಾಸ್ ಮನೆಯಲ್ಲಿ ಈ ಘಟನೆ‌ ನಡೆದಿದೆ. ಪಾಲಿಕೆಯ ವಾರ್ಡ್ ನಂಬರ್ 30 ವ್ಯಾಪ್ತಿಗೆ ಬರುವ ಮನೆಯಲ್ಲಿ ಈ ಅವಘಡ ಸಂಭವಿಸಿದೆ. ಮನೆಯಲ್ಲಿ ಅಡುಗೆ ಮಾಡಲು ಮುಂದಾದ ವೇಳೆ ಸಿಲಿಂಡರ್ ಖಾಲಿಯಾಗಿದ್ದು  ಇದನ್ನ ಗಮನಸಿದ ಮನೆಯವರು ಹೊಸ ಸಿಲಿಂಡರ್ ಬದಲಾವಣೆ ಮಾಡಲು ಮುಂದಾಗಿದ್ದಾರೆ.

ಈ ವೇಳೆ ಸಿಲಿಂಡರ್ ಹೊತ್ತಿ ಉರಿದಿದ್ದು, ಬೆಂಕಿಯ ತೀವ್ರತೆಗೆ ಮನೆಯಲ್ಲಿದ್ದ ದಾಖಲಾತಿ ಸೇರಿದಂತೆ ಹಣ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಸ್ಥಳಕ್ಕೆ ಅಗ್ನಿ ಶಾಮಕದ ದಳದ ಸಿಬ್ಬಂದಿ ಆಗಮಿಸಿ ಕಾರ್ಯಾಚರಣೆ ನಡೆಸಿದ್ದು,  ಸದ್ಯ ಸ್ಟೋಟದಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Key words: mysore- cylinder- Change-cooking-blast