‘ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ’ ಎಂದು ಕರ ಪತ್ರ ಹಂಚುತಿದ್ದ 25ಕ್ಕೂ ಹೆಚ್ಚು ಜನರ ಬಂಧನ.

ಮೈಸೂರು,ಆಗಸ್ಟ್,15,2021(www.justkannada.in):  ದೇಶಾದ್ಯಂತ ಇಂದು 75ನೇ ಸ್ವಾತಂತ್ರ್ಯ ದಿನಾಚರಣೆ  ಸಂಭ್ರಮ ಮನೆ ಮಾಡಿದ್ದು ಈ ಮಧ್ಯೆ ಮೈಸೂರಿನಲ್ಲಿ ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ ಎಂದು ಕರ ಪತ್ರ ಹಂಚಿಕೆ ಮಾಡುತ್ತಿದ್ದ ವಿವಿಧ ಸಂಘಟನೆಯ ಕಾರ್ಯಕರ್ತರನ್ನ ಪೊಲೀಸರು ಬಂಧಿಸಿದ್ದಾರೆ.

ನಗರದಲ್ಲಿ ಕರಪತ್ರ ವಿತರಿಸುತ್ತಿದ್ದ ವಿವಿಧ ಸಂಘಟನೆಯ 25 ಕ್ಕೂ ಹೆಚ್ಚು ಕಾರ್ಯಕರ್ತರನ್ನ ಪೊಲೀಸರು ಬಂಧಿಸಿದ್ದಾರೆ. ನಗರದ ಹಲವಡೆ ಕಾರ್ಯಕ್ರಮ ನಡೆಯುವ ವೇಳೆ ಕರಪತ್ರ ಹಂಚಿಕೆ ಮಾಡುತ್ತಿದ್ದರು. ಈ ಕುರಿತು ಮಾಹಿತಿ‌ ತಿಳಿದ ಪೋಲಿಸರಿಂದ  ಕರಪತ್ರ ಹಂಚುತ್ತಿದ್ದವರನ್ನ ಬಂಧಿಸಿದ್ದಾರೆ.ganja peddlers arrested by mysore police

ಸಿ ಆರ್ ಗ್ರೌಂಡ್ ನಲ್ಲಿ ಕಾರ್ಯಕರ್ತರನ್ನ ಇರಿಸಿದ್ದು  ಪೋಲಿಸರ ನಡೆಗೆ ಸಂಘಟನಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Key words: mysore- arrest- 25 activitist- pamphlet-distribute