ಜಿಂಕೆ ಕೊಂಬು ಸಾಗಿಸಲು ಯತ್ನಿಸಿದ ತಮಿಳುನಾಡಿನ ವ್ಯಕ್ತಿ ಮೈಸೂರು ವಿಮಾನ ನಿಲ್ದಾಣದಲ್ಲಿ ಬಂಧನ.

kannada t-shirts

 

ಮೈಸೂರು, ಮಾ.07, 2020 : (www.justkannada.in news ) ವಿಮಾನದಲ್ಲಿ ಅಕ್ರಮವಾಗಿ ಜಿಂಕೆ ಕೊಂಬು ಸಾಗಿಸಲು ಪ್ರಯತ್ನಿಸಿದ ವ್ಯಕ್ತಿ ಬಂಧನ.

ತಮಿಳುನಾಡು ಮೂಲದ ಕಾರ್ತಿಕ್ ರೆಡ್ಡಿ(38) ಬಂಧಿತ ಆರೋಪಿ.

 mysore-airport-police-arreted-karthik.reddy-tamilnadu

ಶುಕ್ರವಾರ ರಾತ್ರಿ 8:30ರ ವೇಳೆಗೆ ಹೈದರಾಬಾದ್ ಫ್ಲೈಟ್ ಗೆ ತೆರಳುವಾಗ ಮೈಸೂರು ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಆರೋಪಿ.
ಊಟಿಯಿಂದ ರಸ್ತೆ ಮಾರ್ಗದಲ್ಲಿ ಬರುವಾಗ ಬಂಡೀಪುರದ ಬಳಿ ಜಿಂಕೆ ಕೊಂಬು ಸಿಕ್ಕಿದ್ದಾಗಿ ಹೇಳಿರುವ ಆರೋಪಿ.

ಜಿಂಕೆ ಕೊಂಬುಗಳನ್ನು ತುಂಡರಿಸಿ ಪೇಪರ್ ನಲ್ಲಿ ಸುತ್ತಿ ಕೊಂಡೊಯ್ಯುತ್ತಿದ್ದ ಕಾರ್ತಿಕ್ ರೆಡ್ಡಿ. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದ ಬಳಿ ಪರಿಶೀಲನೆ ವೇಳೆ ಸಿಕ್ಕಿ ಬಿದ್ದ ಕಾರ್ತಿಕ್.

 mysore-airport-police-arreted-karthik.reddy-tamilnadu

ವಿದ್ಯಾರಣ್ಯ ಪುರಂ ಠಾಣೆಯಲ್ಲಿ ಪ್ರಕರಣ ದಾಖಲು.

 

key words : mysore-airport-police-arreted-karthik.reddy-tamilnadu

website developers in mysore