50 ರಿಂದ 60 ಸಾವಿರ ಮತಗಳ ಅಂತರದಿಂದ ಮುನಿರತ್ನರನ್ನ ಗೆಲ್ಲಿಸಿ- ಆರ್.ಆರ್ ನಗರದಲ್ಲಿ ಸಿಎಂ ಬಿಎಸ್ ವೈ ಪ್ರಚಾರ…

kannada t-shirts

ಬೆಂಗಳೂರು,ಅಕ್ಟೋಬರ್,31,2020(www.justkannada.in):  50 ರಿಂದ 60 ಸಾವಿರ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಮುನಿರತ್ನರನ್ನ ಗೆಲ್ಲಿಸಿ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಆರ್.ಆರ್ ನಗರ ಜನತೆಯಲ್ಲಿ ಮನವಿ ಮಾಡಿದರು.jk-logo-justkannada-logo

ಆರ್.ಆರ್ ನಗರ ಉಪಚುನಾವಣಾ ಕಣ ರಂಗೇರಿದ್ದು ನಿನ್ನೆಯಷ್ಟೇ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಪ್ರಚಾರ ನಡೆಸಿದ್ದರು. ಇದೀಗ ಇಂದು ಆರ್.ಆರ್ ನಗರದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಅವರೇ ಪ್ರಚಾರದ ಅಖಾಡಕ್ಕೆ ಧುಮುಕಿದ್ದಾರೆ.muniratnam-50-to-60-thousan-votes-cm-bs-yeddyurappa-campaign-rr-nagar

ಮುನಿರತ್ನ ಪರ ಜ್ಞಾನಭಾರತಿ ವಾರ್ಡ್ ನಿಂದ ಸಿಎಂ ಬಿಎಸ್ ಯಡಿಯೂರಪ್ಪ ಪ್ರಚಾರ ಆರಂಭಿಸಿದ್ದು, ಮುನಿರತ್ನ ಪರ ಮತಯಾಚಿಸಿದರು. ಈ ವೇಳೆ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ ಕ್ಷೇತ್ರದಲ್ಲಿ ಶೇ.70ಕ್ಕಿಂತ ಕಡಿಮೆ ಮತದಾನವಾಗಬಾರದು.  ಮುನಿರತ್ನರನ್ನ 50 ರಿಂದ 60 ಸಾವಿರ ಮತಗಳ ಅಂತರದಿಂದ ಮುನಿರತ್ನರನ್ನ ಗೆಲ್ಲಿಸಿ ಎಂದು ಮನವಿ ಮಾಡಿದರು.

Key words: Muniratnam 50 to 60 thousan- votes-CM BS yeddyurappa- campaign -RR nagar

website developers in mysore