ನಮ್ಮ ನಿವಾಸದಲ್ಲಿ ಹಣ ಎಣಿಸಿದ್ದಾರೆಂಬುದು ಹಸಿಸುಳ್ಳು:  ಹೆಚ್.ಡಿಕೆ ಆರೋಪ ಸಾಬೀತುಪಡಿಸಲಿ- ಗೃಹ ಸಚಿವ  ಅರಗ ಜ್ಞಾನೇಂದ್ರ.

kannada t-shirts

ಶಿವಮೊಗ್ಗ,ಜನವರಿ,9,2023(www.justkannada.in): ನಮ್ಮ ನಿವಾಸದಲ್ಲಿ ಹಣ ಎಣಿಸಿದ್ದಾರೆಂಬ ಆರೋಪ ಹಸಿಸುಳ್ಳು. ಹೆಚ್.ಡಿ ಕುಮಾರಸ್ವಾಮಿ ಆರೋಪ ಸಾಬೀತುಪಡಿಸಲಿ ಎಂದು ಗೃಹ ಸಚಿವ  ಅರಗ ಜ್ಞಾನೇಂದ್ರ ಸವಾಲು ಹಾಕಿದರು.

ಈ ಕುರಿತು ಮಾಧ್ಯಮ ಪ್ರಕಟಣೇ ಹೊರಡಿಸಿರುವ  ಗೃಹ ಸಚಿವ ಅರಗ ಜ್ಞಾನೇಂದ್ರ. ನನ್ನ ಮನೆಯಲ್ಲಿ ಹಣ ಎಣಿಸಿದ್ದರು ಎಂಬುದು ಸುಳ್ಳೂ.  ಹೆಚ್.ಡಿ ಕುಮಾರಸ್ವಾಮಿ ಹತಾಶ ಸ್ಥಿತಿಗೆ ತಲುಪಿದ್ದಾರೆ. ಹೆ್ಚ,ಡಿಕೆ ಮಾಡಿದ ಆರೋಪ ಸಾಬೀತು ಮಾಡಲಿ. ಸತ್ಯಕ್ಕೆ ಅಪಚಾರವಾಗುವ ಆರೋಪ ಮಾಡಿದ್ದಾರೆ ಎಂದು ಕಿಡಿಕಾರಿದರು.

ಹೆಚ್.ಡಿಕೆ ನನ್ನ ತೇಜೋವಧೆ ಮಾಡುತ್ತಿದ್ದಾರೆ. ಯಾರದ್ದೂ ಫೋಟೊ ಇಟ್ಟುಕೊಂಡು ಆರೋಪ ಸರಿಯ್ಲಲ. ನನ್ನು ಸೇರಿ ಎಲ್ಲರನ್ನೂ ತನಿಖೆ ಮಾಡಿಸಿ ಎಂದು ಸಚಿವ ಅರಗ ಜ್ಞಾನೇಂದ್ರ ಹೇಳಿದರು.

Key words: money -counted – residence-HDK -prove -allegation – Minister-Araga jnanendra.

website developers in mysore