ಚುನಾವಣೆ ಸಮೀಪ ಹಿನ್ನೆಲೆ ಮೋದಿ ಬೆಂಗಳೂರಿಗೆ ಭೇಟಿ- ಪ್ರಿಯಾಂಕ್ ಖರ್ಗೆ ಟೀಕೆ.

kannada t-shirts

ಬೆಂಗಳೂರು,ನವೆಂಬರ್,10,2022(www.justkannada.in): ಪ್ರಧಾನಿ ಮೋದಿಗೆ ಚುನಾವಣೆಯದ್ಧೇ ಚಿಂತೆ.   ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಮೋದಿ ಬೆಂಗಳೂರಿಗೆ ಬರುತ್ತಿದ್ದಾರೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಟೀಕಿಸಿದರು.

ಈ ಕುರಿತು ಮಾತನಾಡಿದ ಶಾಸಕ ಪ್ರಿಯಾಂಕ್ ಖರ್ಗೆ,  ಮೋದಿ ಅವರು 24 ಗಂಟೆ ಚುನಾವಣೆ ಬಗ್ಗೆಯೇ ಚಿಂತೆ ಮಾಡ್ತಾರೆ. ಗುಜರಾತ್ ನಲ್ಲಿ 2 ಹಂತದಲ್ಲಿ ಚುನಾವಣೆ ನಡೆಯುತ್ತಿದೆ. ಮೋದಿ ಅವರು ಚುನಾವಣೆ ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ.  ಕರ್ನಾಟಕದಲ್ಲೂ ಚುನಾವಣೆ ಹತ್ತಿರ ಬರುತ್ತಿದೆ ಚುನಾವಣೆ ಹಿನ್ನೆಲೆ ಮೋದಿ ಭೇಟಿ ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Key words:  Modi- visits -Bengaluru –mla-Priyank Kharge.

website developers in mysore