ಸಂಪುಟದಲ್ಲಿ ಒಂದೆರಡು ಸಮಾಜದವರೇ ಜಾಸ್ತಿ ಇದ್ದಾರೆ- ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ಅಸಮಾಧಾನ.

kannada t-shirts

ಬೆಂಗಳೂರು,ಜನವರಿ,24,2022(www.justkannada.in):  ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಭಾರಿ ಚರ್ಚೆಯಾಗುತ್ತಿದ್ದು ಈ ನಡುವೆ ಸಚಿವಾಕಾಂಕ್ಷಿಗಳ ಲಾಬಿ ಜೋರಾಗುತ್ತಿದೆ. ಈ ನಡುವೆ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ಸಹ ತಮಗೆ ಈ ಬಾರಿ ಸಚಿವ ಸ್ಥಾನ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಸಚಿವ ಸಂಪುಟದಲಲ್ಲಿ ಒಂದೆರಡು ಸಮಾಜದವರೇ ಜಾಸ್ತಿ ಇದ್ದಾರೆ.  ಉಳಿದವರು ಕೇವಲ ಮತಹಾಕಲು ಮಾತ್ರ ಇದ್ದೀವಾ  ಎಂದು ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ಅಸಮಾಧಾನ ಹೊರ ಹಾಕಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ತಿಪ್ಪಾರಡ್ಡಿ, ಸಚಿವ ಸಂಪುಟ ಪುನರಚನೆ ಮಾಡುವಲ್ಲಿ ಲೋಪವಾಗಿದೆ.  ತಕ್ಷಣವೇ ಸಂಪುಟ ವಿಸ್ತರಣೆ ಮಾಡಿದರೇ ಸೂಕ್ತ. ಈ  ಬಾರಿ ನನಗೆ ಅವಕಾಶ ಸಿಗುವ ಆಶಾಭಾವನೆ ಇದೆ. ನನ್ನ ಹಿರಿತನವನ್ನ ಹೈಕಮಾಂಡ್ ಪರಿಗಣಿಸುತ್ತೆ ಎಂದು ಭಾವಿಸಿದ್ದೇನೆ ಎಂದರು.Minister,Volume,Extension,Equality,not,look,like,Legislator,Thippareddy

ಪಕ್ಷಕಕೆ ಮುಜುಗರ ಆಗುವ ರೀತಿ ವರ್ತಿಸಲ್ಲ. ಈ ಬಾರಿ ನನಗೆ ನ್ಯಾಯ ಸಿಗುವ ವಿಶ್ವಾಸವಿದೆ.  ನನ್ನ ಹಿರಿತನಕ್ಕೆ  ಸ್ಥಾನಕೊಡಲಿಲ್ಲ ಎಂಬ ಅಸಮಾಧಾನವಿದೆ. ಹಲವು ಸಮುದಾಯಗಳಲ್ಲಿ ಅಸಮಾಧಾನ ಇದೆ ಎಂದರು.

Key words:  MLA -GH Thippareddi –minister-position

website developers in mysore