ಸಚಿವ ಭೈರತಿ ಬಸವರಾಜು ಆಪ್ತನ ಮೇಲೆ ಗುಂಡಿನ ಧಾಳಿ

kannada t-shirts

ಬೆಂಗಳೂರು, ಆಗಸ್ಟ, 23, 2020(www.justkannada.in) : ಬೆಳಂಬೆಳಗ್ಗೆ ಬೆಂಗಳೂರಿನಲ್ಲಿ ಗುಂಡಿನ ಧಾಳಿ ಸಚಿವ ಭೈರತಿ ಬಸವರಾಜು ಆಪ್ತ ರಿಯಲ್ ಎಸ್ಟೇಟ್ ಉದ್ಯಮಿ ಆಟೋ ಬಾಬು ಮೇಲೆ ಗುಂಡಿನ ಧಾಳಿ.minister-bhairati basavaraju- close-friend-firing-attack

ಬಾಬು ಮೇಲೆ ಇಬ್ಬರು ಮುಸುಕುಧಾರಿಗಳು ಗುಂಡು ಹಾರಿಸಿರುವುದು ತಿಳಿದು ಬಂದಿದ್ದು, ಗುಂಡಿನ ದಾಳಿಯಿಂದ ಬಾಬು ಪರಾಗಿದ್ದಾರೆ. ಹೀಗಾಗಿಯು, ದುಷ್ಕರ್ಮಿಗಳು ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ.ಈ ಸಂದರ್ಭ ಪರಾರಿಯಾಗಲು ಯತ್ನಿಸಿದ ಆರೋಪಿಯೊಬ್ಬನ್ನು ಸ್ಥಳೀಯರೆ ಹಿಡಿದ ಪೊಲೀಸರಿಗೆ ಒಪ್ಪಿಸಿದ್ದಾರೆ.

ಹಳೇ ದ್ವೇಷವೇ ದಾಳಿಗೆ ಕಾರಣ : ನಿನ್ನೆ ರಾತ್ರಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಗಲಾಟೆಯಾಗಿದೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಬಾಬು ಮೇಲೆ ಗುಂಡಿನ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದ್ದು, ಈ ಸಂಬಂಧವಾಗಿ ಕೆ.ಆರ್.ಪುರಂ ಪೊಲೀಸರು ಹಾಗೂ ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಡಿ.ದೇವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯಗೊಂಡಿರುವ ಬಾಬು ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

Key words :minister-bhairati basavaraju- close-friend-firing-attack

website developers in mysore