ರಾಜೀನಾಮೆಗೆ ಆಗ್ರಹಿಸಿದ ಮಾಜಿ ಸಿಎಂ ಸಿದ್ಧರಾಮಯ್ಯಗೆ ತಿರುಗೇಟು ನೀಡಿದ ಸಚಿವ ಸುಧಾಕರ್.

ಬೆಂಗಳೂರು,ನವೆಂಬರ್,4,2022(www.justkannada.in):  ತುಮಕೂರಿನಲ್ಲಿ ಜಿಲ್ಲಾಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ  ತಾಯಿ ಮತ್ತು  ಅವಳಿ ಮಕ್ಕಳು  ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ಧ ವಿಪಕ್ಷ ನಾಯಕ ಸಿದ್ಧರಾಮಯ್ಯಗೆ ಆರೋಗ್ಯ ಸಚಿವ ಸುಧಾಕರ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಸುಧಾಕರ್, ಸಿದ್ಧರಾಮಯ್ಯ ಸಿಎಂ ಆಗಿದ್ಧ ಅವಧಿಯಲ್ಲಿ ಎಷ್ಟು ಶಿಶು ಹತ್ಯೆಗಳಾಗಿವೆ. ಆಗ ಆರೋಗ್ಯ ಸಚಿವರು ರಾಜೀನಾಮೆ ನೀಡಿದ್ರಾ..? ಮೈಸೂರು ಭಾಗದಲ್ಲಿ ಎಷ್ಟು ಶಿಶು ಹತ್ಯೆಗಳಾಗಿವೆ. ಶಿಶು ಹತ್ಯೆಯಾಗಿರುವ ಬಗ್ಗೆ  ದಾಖಲೆ ಬಿಡುಗಡೆ ಮಾಡುತ್ತೇನೆ. ಸಿದ್ಧರಾಮಯ್ಯ ರಾಜೀನಾಮೆ ನೀಡುತ್ತಾರಾ..? ಎಂದು ಪ್ರಶ್ನಿಸಿದರು.august-15-number-coronavirus-infections-increase-minister-dr-k-the-reformer

ಹಾಗೆಯೇ ಸಿದ್ದು ರಾಜೀನಾಮೆ ನೀಡಿದ್ರೆ ನಾನು ಸಹ ರಾಜೀನಾಮೆ ನೀಡುತ್ತೇನೆ ಎಂದರು.

Key words: Minister- Sudhakar – former CM- Siddaramaiah – resignation.