‘ಜೋಡೆತ್ತು’  ಕುರಿತು ಡಿ.ಕೆಶಿ ಮತ್ತು ಹೆಚ್ ಡಿಕೆಗೆ ಟಾಂಗ್ ಕೊಟ್ಟ ಸಚಿವ ಆರ್.ಅಶೋಕ್…

ಬೆಂಗಳೂರು,ಅಕ್ಟೋಬರ್,27,2020(www.justkannada.in):  ಆರ್. ಆರ್ ನಗರ ಉಪಚುನಾವಣಾ ಕಣ ರಂಗೇರಿದ್ದು ಮೂರು ಪಕ್ಷದ ನಾಯಕರು ಪ್ರಚಾರದಲ್ಲಿ ಬಿಸಿಯಾಗಿದ್ದಾರೆ. ಈ ಮಧ್ಯೆ ಜೋಡೆತ್ತು ಎಂದು ಕರೆಯಲಾಗಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ  ಕಂದಾಯ ಸಚಿವ ಆರ್.ಅಶೋಕ್ ಟಾಂಗ್ ನೀಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯನ್ನ ಜೋಡೆತ್ತು ಎಂದು ಕರೆಯುತ್ತಿದ್ದರು.  ಈಗ ಆ ಜೋಡೆತ್ತು ಕುಂಟೆತ್ತು ಆಗಿವೆ.  ಜೋಡೆತ್ತುಗಳ ಕೊಂಬು ಮುರಿದಿದೆ ಎಂದು ಎಂದು ಲೇವಡಿ ಮಾಡಿದ್ದಾರೆ.

ಇನ್ನು  ವಿಧಾನಸೌಧಕ್ಕೆ ಚಪ್ಪಡಿ ಕಲ್ಲು ಹಾಕ್ತೇನೆ ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಆರ್.ಅಶೋಕ್, ಕಲ್ಲು ಚಪ್ಪಡಿಯನ್ನ ಈಗಾಗಲೇ ಕೆಂಗಲ್ ಹನುಮಂತಯ್ಯ ಹಾಕಿದ್ದಾರೆ. ವ್ಯವಸ್ಥಿತವಾಗಿ ಕಟ್ಟಿದ್ದಾರೆ. ನಿಮ್ಮ ಅವಶ್ಯಕತೆ ಇಲ್ಲ ಎಂದು ಕುಟುಕಿದರು.minister-r-ashok-dk-shivakumar-h-d-kumaraswamy-jodettu

ಇನ್ನು ಕುರುಕ್ಷೇತ್ರದ ನಿಜವಾದ ಹೀರೋ ಮುನಿರತ್ನ.  ರಾಜ್ಯದಲ್ಲಿ ಬಿಎಸ್ ಯಡಿಯೂರಪ್ಪರ ಸರ್ಕಾರ. ಹಾಗೇ ಆರ್.ಆರ್ ನಗರದಲ್ಲಿ ಮುನಿರತ್ನ ಸರ್ಕಾರ ಎಂದರು.

Key words: Minister -R Ashok – DK shivakumar-H D Kumaraswamy- jodettu