44ನೇ ಚೆಸ್ ಒಲಿಂಪಿಯಾಡ್‌ ಟಾರ್ಚ್ ರಿಲೇಯನ್ನು ಸ್ವಾಗತಿಸಿದ ಸಚಿವ ನಾರಾಯಣಗೌಡ.

ಬೆಂಗಳೂರು, ಜು.18,2022(www.justkannada.in):  44 ನೇ ಚೆಸ್ ಒಲಿಂಪಿಯಾಡ್‌ ಟಾರ್ಚ್ ರಿಲೇಯನ್ನು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರೊಂದಿಗೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಡಾ.ನಾರಾಯಣಗೌಡ ಅವರು ಸ್ವಾಗತಿಸಿದರು.

ಚೆನ್ನೈನಲ್ಲಿ ಜುಲೈ 28 ರಿಂದ ಆಗಸ್ಟ್ 10 ರವರೆಗೆ 44ನೇ ಚೆಸ್ ಒಲಿಂಪಿಯಾಡ್ ನಡೆಯಲಿದ್ದು, ಇಂದು ಬೆಂಗಳೂರಿಗೆ ಟಾರ್ಚ್ ರಿಲೇಯನ್ನು ರಾಜಭವನದಲ್ಲಿ ಸ್ವಾಗತಿಸಿದರು.

ಮೊದಲ ಬಾರಿಗೆ ಒಲಿಂಪಿಕ್ ಮಾದರಿಯಲ್ಲಿ ಟಾರ್ಚ್ ರಿಲೇಯನ್ನು ಹಮ್ಮಿಕೊಂಡಿದ್ದು, ಇದರಿಂದ ಚೆಸ್ ಆಟವನ್ನು ಮತ್ತಷ್ಟು ಜನಪ್ರಿಯಗೊಳಿಸಲು ಸಹಕಾರಿ ಆಗಲಿದೆ.  ವಿಶ್ವದ ಅತಿದೊಡ್ಡ ಚೆಸ್ ಈವೆಂಟ್‌ ನ ಆಯೋಜಿಸುವುದು ದೊಡ್ಡ ಸೌಭಾಗ್ಯ, ಆ ಅವಕಾಶ ಮೊದಲ ಬಾರಿಗೆ ನಮ್ಮ ದೇಶಕ್ಕೆ ಸಿಕ್ಕಿರುವುದು ಹೆಮ್ಮೆಯ ವಿಚಾರ. ದೇಶದ 75 ನಗರದಲ್ಲಿ ಮಾತ್ರ ಈ ಟಾರ್ಚ್ ಲೈಟ್ ಸಾಗಲಿದ್ದು, ಕರ್ನಾಟಕದ ಬೆಂಗಳೂರು ಮತ್ತು ಮಂಗಳೂರಿಗೆ ಮಾತ್ರ ಈ ಸುವರ್ಣಾವಕಾಶ ಸಿಕ್ಕಿದೆ.  ಚೆಸ್ ಒಂದು ಬುದ್ದಿವಂತಿಕೆಯ ಆಟವಾಗಿದ್ದು, ನಮ್ಮ ರಾಜ್ಯ ಮತ್ತು ದೇಶದಲ್ಲಿ ವಿಶ್ವನಾಥ್ ಆನಂದ್ ರಂತಹ ಸಾವಿರಾರು ಪ್ರತಿಭೆಗಳು ಬೆಳಕಿಗೆ ಬರಲಿ ಎಂದು ಸಚಿವ ಡಾ.ನಾರಾಯಣಗೌಡ ಅವರು ಹೇಳಿದರು.

ಕರ್ನಾಟಕ ಒಲಂಪಿಕ್ ಅಸೋಸಿಯೇಶನ್ ಅಧ್ಯಕ್ಷ ಕೆ ಗೋವಿಂದರಾಜು, ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Key words: Minister-Narayana Gowda -welcomed – 44th -Chess -Olympiad -Torch Relay