ಅಸಮಾಧಾನಿತ ಸಚಿವರಿಗೆ ಸಚಿವ ಕೆ.ಎಸ್ ಈಶ್ವರಪ್ಪ ಕಿವಿಮಾತು.

ಶಿವಮೊಗ್ಗ,ಜನವರಿ,25,2022(www.justkannada.in):  ನಿನ್ನೆಯಷ್ಟೆ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರನ್ನ ಬದಲಾವಣೆ ಮಾಡಿ ಸಿಎಂ ಬಸವರಾಜ ಬೊಮ್ಮಾಯಿ ಆದೇಶಿಸಿದ್ದು ಈ ಬೆನ್ನಲೆ ತಮಗೆ ಸ್ವಂತ ಜಿಲ್ಲೆ ಸಿಗದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಸಚಿವರಿಗೆ ಸಚಿವ ಕೆ.ಎಸ್ ಈಶ್ವರಪ್ಪ ಕಿವಿಮಾತು ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ,  ಉಸ್ತುವಾರಿ ಸಚಿವರ ಬದಲಾವಣೆಯ ಬಗ್ಗೆ ಚರ್ಚೆ ಅನಗತ್ಯ.  ವರಿಷ್ಠರು ತೀರ್ಮಾನಿಸಿ ಈ ಬದಲಾವಣೆ ಮಾಡಿದ್ದಾರೆ. ಚುನಾವಣೆ ದೃಷ್ಠಿಯಿಂದ ಈ ಬದಲಾವಣೆ  ಮಾಡಲಾಗಿದೆ. ಉಸ್ತುವಾರಿ ಸಚಿವರು ಏನು ಅಭಿವೃದ್ದಿ ಮಾಡಿದ್ದಾರೆ ಪಕ್ಷ ಸಂಘಟನೆ ಹೇಗೇ ಆಗಿದೆ ಎಂದು ತಿಳಿಯುತ್ತದೆ. ಹೀಗಾಗಿ ಸಚಿವರು  ಉಸ್ತುವಾರಿ ಸಚಿವರ ಬದಲಾವಣೆ ಕುರಿತು ಚರ್ಚೆಯನ್ನ ನಿಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ.

ಆಡಳಿತ ನಡೆಸುವ ಸಚಿವರಿಗೆ ಯಾವ ಜಿಲ್ಲೆ ಆದರೇನು.  ಆ ಜಿಲ್ಲೆ ಬೇಕು ಈ ಜಿಲ್ಲೆ ಬೇಡ ಅಂತಾ ಚರ್ಚೆಯಾಕೆ..?  ಪಲ್ಲಿಕ್ಕಿ ಹೊರವುವವನಿಗೆ ಎಡ ಆದರೇನು ಬಲ ಆದರೇನು..?  ದೇವರ ಕೆಲಸ ಅಂದರೇ ಜನರ ಸೇವೆ ಮಾಡುವುದು ಎಂದು ಅಸಮಾಧಾನಿತರಿಗೆ ಸಚಿವ ಕೆ.ಎಸ್ ಈಶ್ವರಪ್ಪ ಕಿವಿಮಾತು ಹೇಳಿದರು.

Key words: minister-KS Eshwarappa-in charge