ವಯಸ್ಸಿಗೆ ಬಂದವರು ಐಶ್ವರ್ಯ ರೈ ಬೇಕು ಅಂತಾರೆ: ಅದ್ರೆ ಇರೋದು ಒಬ್ಬರೇ ತಾನೇ- ಮತ್ತೆ ವಿವಾದಕ್ಕೆ ಗುರಿಯಾದ ಸಚಿವ ಕೆ.ಎಸ್ ಈಶ್ವರಪ್ಪ…

ಬೆಂಗಳೂರು, ಡಿ,6,2019(www.justkannada.in): ಅನರ್ಹ ಶಾಸಕರಿಗೆ ಸ್ಥಾನ ನೀಡುವ ವಿಚಾರವನ್ನ ಐಶ್ವರ್ಯ ರೈಗೆ ಹೋಲಿಕೆ ಮಾಡಿ ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್ ಈಶ್ವರಪ್ಪ ಮತ್ತೆ ವಿವಾದಕ್ಕೆ ಗುರಿಯಾಗಿದ್ದಾರೆ.

ವಯಸ್ಸಿಗೆ ಬಂದವರೆಲ್ಲಾ ‘ಐಶ್ವರ್ಯಾ ರೈ ಬೇಕು ಅಂತಾರೆ , ಆದರೆ ಐರ್ಶರ್ಯಾ ಇರುವುದು ಒಬ್ಬಳೇ ಅಲ್ವಾ?’ ಎಂದು ಸಚಿವ .ಕೆ.ಎಸ್ ಈಶ್ವರಪ್ಪ ಪ್ರಶ್ನೆ ಮಾಡಿದ್ದು ಟೀಕೆಗೆ ಗುರಿಯಾಗಿದೆ.

ಉಪ ಚುನಾವಣೆ ರಿಸಲ್ಟ್ ಬಳಿಕ ಅನರ್ಹ ಶಾಸಕರು ಗೆದ್ದರೇ ಸ್ಥಾನ ನೀಡಿಕೆ ಮತ್ತು ಮತ್ತಷ್ಟು ಡಿಸಿಎಂ ಹುದ್ದೆಗಳ ಸೃಷ್ಟಿಸುವ ಕುರಿತು ಕೇಳಿದ ಪ್ರಶ್ನೆಗೆ ?  ಉತ್ತರಿಸಿದ ಕೆ.ಎಸ್ ಈಶ್ವರಪ್ಪ, ವಯಸ್ಸಿಗೆ ಬಂದವರೆಲ್ಲಾ ‘ಐಶ್ವರ್ಯಾ ರೈ ಬೇಕು ಅಂತಾರೆ , ಆದರೆ ಐರ್ಶರ್ಯಾ ಇರುವುದು ಒಬ್ಬಳೇ ಅಲ್ವಾ?’  ಅವರು ಅಪೇಕ್ಷೆ ಪಡುತ್ತಾರೆ. ಆದರೆ ಅವರಿಗೆ ಅವಕಾಶ ಸಿಗಬೇಕಲ್ಲವೇ.  ಅನರ್ಹರಿಗೆ ಏನು ಹುದ್ದೆ ಕೊಡಬೇಕು ಎಂಬುದನ್ನ ಸಿಎಂ ತೀರ್ಮಾನಿಸುತ್ತಾರೆ  ಎಂದರು.

 

Key words: minister- ks eshwarappa-disqualified MLA- Aishwarya Rai