ಪೇಜಾವರ ಶ್ರೀಗಳನ್ನ ಭೇಟಿ ಮಾಡಿ ಆಶೀರ್ವಾದ ಪಡೆದ ಸಚಿವ ಜಿ.ಟಿ ದೇವೇಗೌಡ…

ಮೈಸೂರು,ಜೂ,1,2019(www.justkannada.in):  ಮೈಸೂರಿಗೆ ಆಗಮಿಸಿರುವ ಉಡುಪಿ ಮಠದ ಪೇಜಾವರ ಶ್ರೀಗಳನ್ನ ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ ಭೇಟಿಯಾಗಿ ಆಶೀರ್ವಾದ ಪಡೆದರು.

ನರೇಂದ್ರ ಮೋದಿ ಅವರು 2ನೇ ಬಾರಿಗೆ ದೇಶದ ಪ್ರಧಾನಿಯಾಗಿ  ಗುರುವಾರ ಅಧಿಕಾರ ಸ್ವೀಕರಿಸಿದರು. ಅಂದು  ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪೇಜಾವರ ಶ್ರೀಗಳು ನಂತರ ಮೈಸೂರಿಗೆ ಆಗಮಿಸಿದ್ದರು. ಮೈಸೂರಿನ ಮೈಸೂರಿನ ಕೃಷ್ಣ ಧಾಮದಲ್ಲಿ ಉಳಿದುಕೊಂಡಿದ್ದರು.

ಕೃಷ್ಣ ಧಾಮಕ್ಕೆ ತೆರಳಿದ ಸಚಿವ ಜಿಟಿ ದೇವೇಗೌಡರು ಪೇಜಾವರ ಶ್ರೀಗಳನ್ನ ಭೇಟಿ ಮಾಡಿ ಆಶೀರ್ವಾದ ಪಡೆದು ಅವರ ಆರೋಗ್ಯವನ್ನ ವಿಚಾರಿಸಿದರು.

Key words: Minister GT Deve Gowda  meet Pajavar shree and Received blessings.

#Mysore #MinisterGTDeveGowda #Pajavarshree #blessings.