ಮುಷ್ಕರ ನಿರತ ವೈದ್ಯರ ಜೊತೆಗಿನ ಸಭೆ ಅಂತ್ಯ: ವೈದ್ಯರ ಬೇಡಿಕೆ ಈಡೇರಿಕೆಗೆ ನಿರ್ಧಾರ…

kannada t-shirts

ಬೆಂಗಳೂರು,ಸೆಪ್ಟಂಬರ್,15,2020(www.justkannada.in):  ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ವೈದ್ಯರು ಮುಷ್ಕರ ಹೂಡಿದ ಹಿನ್ನೆಲೆ ಇಂದು ಆರೋಗ್ಯ ಸಚಿವ ಶ್ರೀರಾಮುಲು ಅವರ ನೇತೃತ್ವದಲ್ಲಿ  ಮುಷ್ಕರ ನಿರತ ವೈದ್ಯರ ಜೊತೆ ಸಭೆ ನಡೆಯಿತು.jk-logo-justkannada-logo

ಆರೋಗ್ಯ ಸಚಿವರಾದ ಶ್ರೀರಾಮುಲು ಅವರ ನೇತ್ರತ್ವದಲ್ಲಿ  ಮುಷ್ಕರ ನಿರತ ವೈದ್ಯರ ಜೊತೆ ಇಂದು ನಡೆದ ಸಭೆ ಸುಖಾಂತ್ಯವಾಗಿದೆ. ವೈದ್ಯರ ಬೇಡಿಕೆಗಳನ್ನು ಈಡೇರಿಸಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ವೈದ್ಯರ ಸಂಘವು ತಮ್ಮ ಇತರೆ ಸದಸ್ಯರ ಜೊತೆ ಸಭೆ ನಡೆಸಿ ಇದೇ 18 ರಂದು ಅಂತಿಮ ನಿರ್ಣಯ ಪ್ರಕಟಿಸಲಿದೆ.meeting-doctors-decision-fulfill-doctor-demand

ಸಭೆಯಲ್ಲಿ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್, ವೈದ್ಯಕೀಯ ಸಚಿವರಾದ ಸುಧಾಕರ್, ಆಯುಕ್ತರಾದ ಪಂಕಜ್ ಕುಮಾರ್ ಪಾಂಡೆ, ACS ಜಾವೇದ್ ಅಖ್ತರ್, ವೈದ್ಯರ ಸಂಘದ ಪ್ರಮುಖರು ಉಪಸ್ಥಿತರಿದ್ದರು.

Key words: meeting –doctors-Decision – fulfill –doctor – demand.

website developers in mysore