ದಾಂಪತ್ಯ ಕಲಹ : ಶೂಟ್ ಮಾಡಿ ಪತ್ನಿ ಹತ್ಯೆ ಮಾಡಿದ ಪತಿ 

ಬೆಂಗಳೂರು,ನವೆಂಬರ್,16,2020(www.justkannada.in) : ಬಸವೇಶ್ವರನಗರದಲ್ಲಿ ದಾಂಪತ್ಯ ಕಲಹಕ್ಕೆ ಪತ್ನಿಯನ್ನೇ ಗನ್ ನಿಂದ ಶೂಟ್ ಮಾಡಿ ಕೊಂದು ಪತಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.kannada-journalist-media-fourth-estate-under-loss

ಸುಮಿತ್ರಾ ಕೊಲೆಯಾದ ದುರ್ದೈವಿ. ಕೊಲೆಗೆ ದಂಪತಿಯ ನಡುವಿನ ಕಲಹವೇ ಕಾರಣ ಎಂಬುದು ತಿಳಿದು ಬಂದಿದೆ.

ಪತ್ನಿ ಸುಮಿತ್ರಾಗೆ ಗುಂಡಿಕ್ಕಿ ಹತ್ಯೆಗೈದ ಪತಿ ಕಾಳಪ್ಪ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಪತಿ ಕಾಳಪ್ಪ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನಾ ಸ್ಥಳಕ್ಕೆ ಬಸವೇಶ್ವರ ನಗರ ಪೊಲೀಸರು ಭೇಟಿ  ನೀಡಿ, ಪರಿಶೀಲನೆ ನಡೆಸಿದ್ದಾರೆ.

Marital,Strife,husband,shot,killed,wife

key words : Marital-Strife-husband-shot-killed-wife