ಮೂವರ ಮನೆಗಳಿಗೆ ಹೋಗಿ ನೋಡಿ ಸ್ವಾಮಿ. ಕಣ್ಣಲ್ಲಿ ನೀರಲ್ಲ, ರಕ್ತ ಬರುತ್ತೆ- ಸಿಎಂ ಬೊಮ್ಮಾಯಿ ವಿರುದ್ಧ ಸಿಎಂ ಇಬ್ರಾಹಿಂ ವಾಗ್ದಾಳಿ.

ಬೆಂಗಳೂರು,ಆ,1,2022(www.justkannada.in):  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ಯೆಯಾದ ಮಸೂದ್ ಮತ್ತು ಪಾಝಿಲ್ ನಿವಾಸಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡದಿರುವುದಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಿಎಂ ಇಬ್ರಾಹಿಂ,ಮಾನವೀಯತೆಗೂ ಮಸೂದ್, ಪಾಝಿಲ್ ಮನೆಗೆ ಸಿಎಂ ಬೊಮ್ಮಾಯಿ ಹೋಗಲಿಲ್ಲ , ಮುಸ್ಲಿಂ ಸೈನಿಕರೊಬ್ಬರು ಮೃತಪಟ್ಟಾಗಲೂ ಹೋಗಲಿಲ್ಲ. ಮೂವರ ಮನೆಗಳಿಗೆ ಹೋಗಿ ನೋಡಿ ಸ್ವಾಮಿ. ಕಣ್ಣಲ್ಲಿ ನೀರಲ್ಲ ರಕ್ತ ಬರುತ್ತೆ. ಮಾತನಾಡಿದ್ರೆ ಜಾತಿ ಅಂತಾರೆ, ಹಿಂದುತ್ವ ಅಂತಾರೆ ಎಂದು ಕಿಡಿಕಾರಿದರು.

ನಾನು ಅರ್ಜಿ ಹಾಕಿ ಮುಸ್ಲಿಂ ಸಮುದಾಯದಲ್ಲಿ ಹುಟ್ಟಿಲ್ಲ. ನಮ್ಮ ಕೈಗೆ ಆಡಳಿತ ಬರಲಿ. ಎಲ್ಲಾ ಸರಿ ಮಾಡುತ್ತೇವೆ ಪೊಲೀಸರಿಗೆ ಫ್ರಿಹ್ಯಾಂಡ್ ನೀಡಿ. ಅವರು ನಿಶ್ಯಕ್ತರಲ್ಲ.  ಸಿಎಂ ಇಬ್ರಾಹಿಂ ಬರೀ ಒಂದು ವೋಟಿಕಾಗಿ ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

Key words:  mangalore-murder case-cm ibhim-CM-Bommai