ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಯೋಧ ಹಾಕಿದ್ದ  ಮೊದಲ ಮತವೇ ಅಸಿಂಧು…

ಮಂಡ್ಯ,ಮೇ,10,2019(www.justkannada.in): ಮಂಡ್ಯ ಲೋಕಸಭೆ  ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ಅವರಿಗೆ ಹಾಕಿದ್ದ ಮೊದಲ ಮತವೇ ಅಸಿಂಧುವಾಗಿದೆ.

ಹೌದು, ಗೌಪ್ಯತೆ ಕಾಪಾಡದ ಹಿನ್ನೆಲೆ ಮಂಡ್ಯ ಮೂಲದ ಸಿಆರ್​​ಪಿಎಫ್ ಯೋಧ ರಾಜನಾಯಕ್ ಎಂಬುವವರು ಅಂಚೆ ಮತದಾನ ಮೂಲಕ ಹಾಕಿದ್ದ ಮತವನ್ನ ಚುನಾವಣ ಆಯೋಗ ಅಸಿಂಧುಗೊಳಿಸಿ ಆದೇಶ ಹೊರಡಿಸಿದೆ.

ಅಂಚೆ ಮತದಾನ ಮೂಲಕ ಸುಮಲತಾರಿಗೆ ಯೋಧ ರಾಜನಾಯಕ್  ಮತ ಹಾಕಿದ್ದರು. ತಾನು ಸುಮಲತಾ ಅವರಿಗೆ ವೋಟ್ ಹಾಕಿರುವುದನ್ನ ಸೆಲ್ಫಿ ತೆಗೆದು  ಫೇಸ್ಬುಕ್​​ ಗೆ ಅಪ್​ಲೋಡ್​​ ಮಾಡಿದ್ದರು. ಹೀಗಾಗಿ  ಮತದಾನದ ಗೌಪ್ಯತೆ ಕಾಪಾಡದ ಹಿನ್ನೆಲೆ ಯೋಧ ರಾಜನಾಯಕ್ ಹಾಕಿದ್ದ ಮತ ಅಸಿಂಧುವಾಗಿದೆ.

ಈ ಸಂಬಂಧ ಯೋಧನ ವಿರುದ್ದ ಏ. 10ರಂದು ದೂರು ದಾಖಲಾಗಿತ್ತು. ದೂರಿನ ಹಿನ್ನೆಲೆ ಚುನಾವಣಾ ಆಯೋಗದಿಂದ ಯೋಧನ ಮತ ಅಸಿಂಧುಗೊಳಿಸಿ ಶಿಸ್ತುಕ್ರಮ ಕೈಗೊಳ್ಳಲಾಗಿದೆ.

Key words: Mandya- Independent candidate –Sumalatha- first- vote – Invalid