ಮೈಸೂರಿಗೆ ವಿಮಾನಯಾನ ಸೇವೆ ಬೇಕೆ? ಬೇಡವೇ? ಮೈಸೂರಿಗರ ಅಭಿಪ್ರಾಯ ಕೇಳಿದ ಸಂಸದ ಪ್ರತಾಪ್ ಸಿಂಹ

ಮೈಸೂರು, ಮೇ 21, 2020 (www.justkannada.in): ಮೈಸೂರಿಗೆ ವಿಮಾನಯಾನ ಸೇವೆ ಬೇಕೆ? ಬೇಡವೇ? ಎಂಬ ಬಗ್ಗೆ ಸಂಸದ ಪ್ರತಾಪ್ ಸಿಂಹ ಮೈಸೂರಿಗರ ಅಭಿಪ್ರಾಯ ಕೇಳಿದ್ದಾರೆ.

ಮೇ 25 ರಿಂದ ದೇಶಾದ್ಯಂತ ವಿಮಾನ ಸೇವೆ ಆರಂಭಕ್ಕೆ ಸಿದ್ದತೆ ನಡೆದಿದೆ. ಮೈಸೂರಿನಲ್ಲಿ ವಿಮಾನ ಹಾರಟಕ್ಕೆ ಮುಂದಾದ ಅಲಯನ್ಸ್ ಏರ್ ಸಂಸ್ಥೆ. ಮೈಸೂರಿನಲ್ಲಿ ವಿಮಾನ ಹಾರಾಟಕ್ಕೆ ಅನುಮತಿ ಕೇಳಿದ ಅಲಯನ್ಸ್ ಏರ್ ಸಂಸ್ಥೆ. ಹೀಗಾಗಿ ಈ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಕೇಳಿ ನಿರ್ಧರಿಸುವುದಾಗಿ ಪ್ರತಾಪ್‌ಸಿಂಹ ಹೇಳಿದ್ದಾರೆ.

ನಿನ್ನೆ ಫೇಸ್‌ಬುಕ್‌ ಲೈವ್‌ನಲ್ಲಿ ಸಾರ್ವಜನಿಕ ಅಭಿಪ್ರಾಯ ಕೇಳಿದ್ದ ಪ್ರತಾಪ್‌ಸಿಂಹ. ಮೈಸೂರಿನಿಂದ ವಿವಿಧ ಭಾಗಕ್ಕೆ ವಿಮಾನ ಹಾರಾಟ ಮಾಡುತ್ತದೆ. ಅದರ ಅಗತ್ಯ ಇದೇಯೋ ಇಲ್ಲವೋ ಎಂಬುದನ್ನ ನೀವೆ ತಿಳಿಸಿ. ಬಹುತೇಕರ ಅಭಿಪ್ರಾಯದಂತೆ ಮೈಸೂರಿನಲ್ಲಿ ವಿಮಾನ ಹಾರಾಟ ಆರಂಭದ ನಿರ್ಧಾರ. ಈಗ ಬಹುತೇಕರು ಸೋಷಿಯಲ್ ಮೀಡಿಯಾದಲ್ಲಿ ಇದ್ದಾರೆ. ಬಹುತೇಕ ಮೈಸೂರು ಸಂಬಂಧಿತ ಪೇಜ್‌ಗಳಿವೆ. ಅದಕ್ಕೆ ಅಲ್ಲಿ ಅಭಿಪ್ರಾಯ ಕೇಳಿದೆ ಎಂದಿದ್ದಾರೆ.

ಈ ಬಗ್ಗೆ ಇನ್ನೆರಡು ದಿನದಲ್ಲಿ ತೀರ್ಮಾನ ಮಾಡ್ತಿವಿ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್‌ಸಿಂಹ ಹೇಳಿದ್ದಾರೆ.