ಲೋಕಾಯುಕ್ತವನ್ನೇ ಇಲ್ಲವಾಗಿಸಿದ್ದು  ಸಿದ್ದರಾಮಯ್ಯ : ಎಚ್.‌ವಿಶ್ವನಾಥ್ ಆರೋಪ

ಮೈಸೂರು,ಡಿಸೆಂಬರ್,19,2020(www.justkannada.in) : ಅರ್ಕಾವತಿ ಬಡಾವಣೆ ಡಿ ನೋಟಿಫಿಕೇಶನ್ ಪ್ರಕರಣದಲ್ಲಿ ಜೈಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಲೋಕಾಯುಕ್ತವನ್ನೇ ಇಲ್ಲವಾಗಿಸಿದ್ದು ಇದೇ ಸಿದ್ದರಾಮಯ್ಯ ಎಂದು ವಿಧಾನ ಪರಿಷತ್ ಸದಸ್ಯ ಎಚ್.‌ವಿಶ್ವನಾಥ್ ಆರೋಪಿಸಿದರು.

Teachers,solve,problems,Government,bound,Minister,R.Ashok

ದಲಿತರ ಬಲಗೈ ಸಮುದಾಯ ನನಗೆ ಮತ ನೀಡಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ವಿಶ್ವನಾಥ್ ಟಾಂಗ್ ನೀಡಿದ್ದು, ನಾನೇನು ಜೈಲಿಗೆ ಹೋಗಿ ಬಂದಿಲ್ಲ ಎನ್ನುತ್ತಿರುವ ಸಿದ್ದರಾಮಯ್ಯ. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ಪಕ್ಷವನ್ನು ನೀವು ನಿರ್ನಾಮ ಮಾಡಿದಿರಿ

ಇಡೀ ದಲಿತ ಸಮುದಾಯ ಕಾಂಗ್ರೆಸ್ ಪಕ್ಷವನ್ನು ದೊಡ್ಡ ಮಟ್ಟದಲ್ಲಿ ಬೆಂಬಲಿಸಿಕೊಂಡು ಬಂದಿದೆ. ಯಾವ ಪಕ್ಷ ನಿಮ್ಮನ್ನು ಮುಖ್ಯಮಂತ್ರಿ ಮಾಡಿತೋ ಅದೇ ಕಾಂಗ್ರೆಸ್ ಪಕ್ಷವನ್ನು ನೀವು ನಿರ್ನಾಮ ಮಾಡಿದಿರಿ. ಈ ಕುರಿತು ನೀವು ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಸಿದ್ದರಾಮಯ್ಯಗೆ ವಿಶ್ವನಾಥ್ ಸಲಹೆ ನೀಡಿದ್ದಾರೆ.

ಚಾಮುಂಡೇಶ್ವರಿ ಗೆಲ್ಲೊಲ್ಲ ಎಂದು ಬಾದಮಿಗೆ ಓಡಿ ಹೋದ್ರಿ

lokauktha,Dissolved,Siddaramaiah,H.Vishwanath,Accusedನೀವು ಪರಮೇಶ್ವರ್ ಸೋಲಿಸಿದಾಗ ನಿಮಗೆ ಗೊತ್ತಾಗಲಿಲ್ವಾ. ಚಾಮುಂಡೇಶ್ವರಿ ಗೆಲ್ಲೊಲ್ಲ ಅಂತ ಗೊತ್ತಾದಾಗ ಬಾದಮಿಗೆ ಓಡಿ ಹೋದ್ರಿ. ಐದು ವರ್ಷ ಆಡಳಿತ ನಡೆಸಿದ ನಿಮ್ಮನ ಜನ ದಿಕ್ಕರಿಸಿದರು‌ ಎಂದು ಟೀಕಿಸಿದರು.

key words : lokauktha-Dissolved-Siddaramaiah-H.Vishwanath- Accused