ಮುಂದಿನ ಅಧಿವೇಶನದಲ್ಲಿ ಎಲ್ಲರೂ ಪ್ರಮಾಣ ಮಾಡಿ ಸದನ ಶುರು ಮಾಡಬೇಕು – ಎಂಎಲ್‌ಸಿ ಅಲ್ಲಂ ವೀರಭದ್ರಪ್ಪ…

ಮೈಸೂರು,ಜನವರಿ,12,2021(www.justkannada.in): ಇತ್ತೀಚೆಗೆ ವಿಧಾನ ಪರಿಷತ್‌‌ ನಲ್ಲಿ ನಡೆದ ಗದ್ಧಲ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ವಿಧಾನಪರಿಷತ್ ಹಿರಿಯ ಸದಸ್ಯ ಅಲ್ಲಂ ವೀರಭಧ್ರಪ್ಪ,  ಮುಂದಿನ ಅಧಿವೇಶನದಲ್ಲಿ ಎಲ್ಲರೂ ಪ್ರಮಾಣ ಮಾಡಬೇಕು. ನಾವು ಮುಂದೆ ಆ ರೀತಿ ನಡೆದುಕೊಳ್ಳುವುದಿಲ್ಲ ಎಂದು ಪ್ರಮಾಣ ಮಾಡಿ ಸದನ ಶುರು ಮಾಡಬೇಕು ಎಂದು ಸಲಹೆ ನೀಡಿದ್ದಾರೆ.jk-logo-justkannada-mysore

ಮೈಸೂರಿನಲ್ಲಿ ಈ ಬಗ್ಗೆ ಇಂದು ಮಾತನಾಡಿದ  ಎಂಎಲ್ ಸಿ ಅಲ್ಲಂ ವೀರಭಧ್ರಪ್ಪ, ಅಂದು ನಡೆದದ್ದು ಗದ್ದಲವಲ್ಲ, ದುರ್ಘಟನೆ. ಮುಂದಿನ ಅಧಿವೇಶನದಲ್ಲಿ ನಾವು ಮುಂದೆ ಆ ರೀತಿ ನಡೆದುಕೊಳ್ಳುವುದಿಲ್ಲ ಎಂದು ಎಲ್ಲರೂ ಪ್ರಮಾಣ ಮಾಡಬೇಕು ಎಂದು ತಿಳಿಸಿದರು.legislative council-riot-case - Swear-session-mysore- MLC- Allam Veerabhadrappa

ಪರಿಷತ್ ಬೇಕೊ ಬೇಡವೋ ಎಂಬ ಚರ್ಚೆ  ನಡೆಯುತ್ತಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅಲ್ಲಂ ವೀರಭದ್ರಪ್ಪ, ಪರಿಷತ್ ರದ್ದು ಮಾಡೋದು ಬಿಡೋದು ಸರ್ಕಾರಕ್ಕೆ ಬಿಟ್ಟ ವಿಚಾರ. ವಿಧಾನಸಭೆಗಿಂತ ವಿಧಾನ ಪರಿಷತ್‌ ನಲ್ಲಿ ಹೆಚ್ಚು ಚರ್ಚೆ ಆಗುತ್ತಿತ್ತು. ನಾನು ಈ ಹಿಂದೆ ಸಚಿವನಾಗಿದ್ದ ವೇಳೆ ಪರಿಷತ್ ಸದಸ್ಯರ ಪ್ರಶ್ನೆಗಳಿಗೆ ಭಯ ಬೀಳುತಿದ್ದೆ. ಹೀಗಾಗಿಯೇ ಪರಿಷತ್ತನ್ನ ಬುದ್ದಿಜೀವಿಗಳು, ಹಿರಿಯರ‌ ಮನೆ ಅಂತಿದ್ದರು.  ಈಗ ಆ ರೀತಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Key words: legislative council-riot-case – Swear-session-mysore- MLC- Allam Veerabhadrappa