ಲಕ್ಷ್ಮಣ್ ಸವದಿ ಅವರು ಡಿ.ಕೆಶಿ ಸಂಪರ್ಕದಲ್ಲಿದ್ದಾರೆ- ಎಂಎಲ್ ಸಿ ಲಖನ್ ಜಾರಕಿಹೊಳಿ.

ಬೆಳಗಾವಿ,ಜನವರಿ,27,2022(www.justkannada.in): ಜೆಡಿಎಸ್ ಮತ್ತು ಬಿಜೆಪಿ  ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿದ ಬೆನ್ನಲ್ಲೇ ಇದೀಗ ಎಂಎಲ್​ಸಿ ಲಖನ್ ಜಾರಕಿಹೊಳಿ ಹೊಸಬಾಂಬ್ ಸಿಡಿಸಿದ್ದಾರೆ.

ಹೌದು,  ಲಕ್ಷ್ಮಣ ಸವದಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಂಪರ್ಕದಲ್ಲಿದ್ದಾರೆ. ಡಿಕೆ ಶಿವಕುಮಾರ್ , ಸವದಿ ಮಾತನಾಡಿರುವ ಮೊಬೈಲ್ ನಂಬರ್ ಇದೆ ಎಂದು ಲಖನ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.

ಮಾಧ್ಯಮದ ಜತೆ ಮಾತನಾಡಿದ ಲಖನ್ ಜಾರಕಿಹೊಳಿ, ಸವದಿ, ಡಿಕೆಶಿ ಮಾತನಾಡಿದ ನಂಬರ್ ನಮ್ಮ ಬಳಿ ಇದೆ. ಲಕ್ಷ್ಮಣ್ ಸವದಿ ಬೇರೆ ನಂಬರ್ ​ನಿಂದ ಡಿಕೆಶಿ ಜೊತೆ ಮಾತುಕತೆ ನಡೆಸಿದ್ದಾರೆ. ಸೋತ ನಾಯಕರೇ ಡಿಕೆಶಿ ಜತೆ ಸಂಪರ್ಕದಲ್ಲಿರುವವರು ಎಂದು ಲಖನ್ ಜಾರಕಿಹೊಳಿ ಹೇಳಿದ್ದಾರೆ.cd-case-lakhan-jarakiholli-resigns-dk-sivakumar

ಬಿಜೆಪಿ ವರಿಷ್ಠರು ರಮೇಶ್, ಬಾಲಚಂದ್ರರನ್ನ ಬಳಸಿಕೊಳ್ಳಬೇಕು. ರಮೇಶ್ ಜಾರಕಿಹೊಳಿಗೆ ಮಂತ್ರಿ ಸ್ಥಾನ ಕೊಟ್ಟರೆ ಇನ್ನೂ 25 ಸ್ಥಾನ ಹೆಚ್ಚು ಗೆಲ್ಲುತ್ತಾರೆ. 25ಕ್ಕೂ ಹೆಚ್ಚು ಶಾಸಕರು  ರಮೇಶ್ ಸಂಪರ್ಕದಲ್ಲಿ ಇದ್ದಾರೆ ಎಂದು ಲಖನ್ ಜಾರಕಿಹೊಳಿ ತಿಳಿಸಿದ್ದಾರೆ.

Key words: Laxman Sawadi –DK Shivakumar- Lakhan jarakiholi.