ಲಾಗೈಡ್ ಕ್ಯಾಲೆಂಡರ್ ಬಿಡುಗಡೆ : ಸಾಧಕರಿಗೆ ಸನ್ಮಾನ

ಮೈಸೂರು,ಡಿಸೆಂಬರ್,06,2020(www.justkannada.in) :  ‘ಲಾಗೈಡ್’ ಕನ್ನಡ ಮಾಸ ಪತ್ರಿಕೆಯ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ನಾಲ್ವರು ಸಾಧಕರನ್ನು ಸನ್ಮಾನಿಸಲಾಯಿತು.logo-justkannada-mysore

ನಗರದಲ್ಲಿಂದು ಕನ್ನಡ ಕಾನೂನು ಮಾಸ ಪತ್ರಿಕೆ ವತಿಯಿಂದ ಆಯೋಜಿಸಿದ್ದ ‘’2021ರ  ಕ್ಯಾಲೆಂಡರ್ ಮತ್ತು ಡೈರಿ ಬಿಡುಗಡೆ ಸಮಾರಂಭ’’ ದಲ್ಲಿ ಪೋಲೀಸ್ ನಿವೃತ್ತ ಮಹಾ ನಿರ್ದೇಶಕ ಓಂ ಪ್ರಕಾಶ್ ಕ್ಯಾಲೆಂಡರ್ ಬಿಡುಗಡೆ ಮಾಡಿ, ಸಾಧಕರನ್ನು ಸನ್ಮಾನಿಸಿದರು.

ನಾಲ್ವರು ಸಾಧಕರಿಗೆ ಸನ್ಮಾನ

ಕಾರ್ಯಕ್ರಮದಲ್ಲಿ ಸಿಐಡಿ ಡಿವೈಎಸ್ ಪಿ ಕೆ.ಎನ್.ಯಶವಂತ ಕುಮಾರ್, ರಘುಲಾಲ್ ಅಂಡ್ ಕಂಪನಿ ಮಾಲೀಕ ಸಿ.ಎನ್.ರಾಘವನ್, ಹಿರಿಯ ವರದಿಗಾರ ಕೆ.ಪಿ.ನಾಗರಾಜ್, ವಕೀಲ ಡಿ.ಆರ್.ಕರೀಗೌಡ ಅವರನ್ನು ಸನ್ಮಾನಿಸಲಾಯಿತು.

LaGuide-Calendar-Release-pros-Good-luck

ಪ್ರದಾನ ಜಿಲ್ಲಾ ಸತ್ರ ನಿವೃತ್ತ ನ್ಯಾಯಾಧೀಶ ಸಿ.ಜಿ.ಹುನಗುಂದ, ಡಿಸಿಪಿ ಪ್ರಕಾಶ್ ಗೌಡ, ಲಾಗೈಡ್ ಸಂಪಾದಕ ಎಚ್.ಎನ್.ವೆಂಕಟೇಶ್ ಇತರರು ಭಾಗಿಯಾಗಿದ್ದರು.

LaGuide-Calendar-Release-pros-Good-luck

key words : LaGuide-Calendar-Release-pros-Good-luck