ನಾಳೆಯಿಂದ ಎಸಿ ಬಸ್ ಗಳ ಸಂಚಾರಕ್ಕೆ ಕೆಎಸ್ ಆರ್ ಟಿಸಿ ನಿರ್ಧಾರ

ಬೆಂಗಳೂರು,ಜೂ,24,2020(www.justkannada.in): ರಾಜ್ಯದ ಕೊರೋನಾದಿಂದ ಲಾಕ್ಡೌನ್ ಮಾಡಿದ ಹಿನ್ನೆಲೆ ಸ್ಥಗಿತಗೊಳಿಸಲಾಗಿದ್ದ  ಎಸಿ ಬಸ್ ಗಳ ಸಂಚಾರವನ್ನ ನಾಳೆಯಿಂದ ಆರಂಭಿಸಲು ಕೆಎಸ್ ಆರ್ ಟಿಸಿ ನಿರ್ಧರಿಸಿದೆ.

ನಾಳೆಯಿಂದ ಬೆಂಗಳೂರಿನಿಂದ 8 ಕಡೆಗೆ ಎಸಿ ಬಸ್ ಗಳ ಸಂಚಾರ ನಡೆಯಲಿದೆ. ಬೆಂಗಳೂರಿನಿಂದ ಮೈಸೂರು, ಮಂಗಳೂರು, ಕುಂದಾಪುರ, ಚಿಕ್ಕಮಗಳೂರು, ಮಡಿಕೇರಿ, ದಾವಣಗೆರೆ, ಶಿವಮೊಗ್ಗ, ವಿರಾಜಪೇಟೆಗೆ ಎ.ಸಿ ಬಸ್‌ಗಳು ಸಂಚರಿಸಲಿವೆ.KSRTC - decision - AC –bus- tomorrow

ಈ ನಡುವೆ ಬಸ್ ಗಳಲ್ಲಿನ ತಾಪಮಾನ 24 ರಿಂದ 25 ಸೆಲ್ಸಿಯಸ್ ಇರುವಂತೆ ನಿರ್ವಹಿಸಲು ಸಿಬ್ಬಂದಿಗೆ ಸೂಚನೆ ನೀಡಲಾಗಿದೆ.  ಕೊರೋನಾ ಸೋಂಕು ಹರಡುವುದನ್ನ ತಡೆಯುವ ಸಲುವಾಗಿ ರಾತ್ರಿ ಪ್ರಯಾಣದಲ್ಲಿ ಹೊದಿಕೆ ನೀಡದಿರಲು ನಿರ್ಧರಿಸಲಾಗಿದೆ.

Key words: KSRTC – decision – AC –bus- tomorrow