ರಸ್ತೆ ಅಪಘಾತದಲ್ಲಿ KSOU ನಿವೃತ್ತ ಪ್ರಾಧ್ಯಾಪಕ ಡಾ. ಅಪ್ಪಾಜಿಗೌಡ ನಿಧನ.

ಮೈಸೂರು,ಆಗಸ್ಟ್,17,2022(www.justkannada.in):   ಕಳೆದ ಎರಡು ದಿನಗಳ  ಹಿಂದೆ ರಸ್ತೆ ಅಪಘಾತದಲ್ಲಿ  ಗಂಭೀರವಾಗಿ ಗಾಯಗೊಂಡಿದ್ಧ ಕರ್ನಾಟಕ ರಾಜ್ಯ ಮುಕ್ತ ವಿವಿ ನಿವೃತ್ತ ಪ್ರಾಧ್ಯಾಪಕ ಡಾ. ಅಪ್ಪಾಜಿಗೌಡ ಚಿಕಿತ್ಸೆ ಫಲಿಸದೆ ಇಂದು ನಿಧನರಾಗಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಅಪಘಾತ ಸಂಭವಿಸಿತ್ತು. ಈ ವೇಳೆ ಅಪ್ಪಾಜಿಗೌಡರು ಬೈಕ್ ನಿಂದ ಬಿದ್ದು ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿತ್ತು. ತಕ್ಷಣ ಅವರನ್ನ ಮೈಸೂರಿನ ಕಾಳಿದಾಸ ರಸ್ತೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮೆದುಳು ನಿಷ್ಕ್ರಿಯವಾದ ಹಿನ್ನೆಲೆ ಅಪ್ಪಾಜಿಗೌಡರು ಮೃತಪಟ್ಟಿದ್ದಾರೆ.

ಮೈಸೂರಿನ ಬೋಗಾದಿ ಬ್ಯಾಂಕರ್ಸ್ ಕಾಲೋನಿಯ ನಿವಾಸದಲ್ಲಿ ಇಂದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಾಳೆ ಕೆ.ಆರ್.ನಗರ ತಾಲೂಕಿನ ಸ್ವಗ್ರಾಮದಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ.

ಡಾ.ಅಪ್ಪಾಜಿಗೌಡ ಅವರ ನಿಧನಕ್ಕೆ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಸಂತಾಪ ಸೂಚಿಸಿದ್ದಾರೆ. ನಾಲ್ಕು ದಶಕಗಳ ಒಡನಾಡಿಯ ಅಕಾಲಿಕ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

Key words: KSOU -retired professor – Appajigowda- passed away- road accident.