ಕೆ.ಆರ್.ಎಸ್ ಆಣೆಕಟ್ಟು ವಿಚಾರದಲ್ಲಿ ರಾಜಕೀಯ ಬೇಡ, ತಜ್ಞರು ಪರೀಕ್ಷೆ ನಡೆಸಲಿ ಎಂದ ಎನ್.ಮಹೇಶ್

ಮೈಸೂರು, ಜುಲೈ 11, 2021 (www.justkannada.in): ಕೆ.ಆರ್.ಎಸ್ ಆಣೆಕಟ್ಟು ಬಿರುಕು ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಎನ್.ಮಹೇಶ್ ಪ್ರತಿಕ್ರಿಯಿಸಿದ್ದಾರೆ.

ಕೆ ಆರ್ ಎಸ್ ಆಣೆಕಟ್ಟೆ ಬಿರುಕು ಬಿಟ್ಟಿದೆ ಅನ್ನೊದು ಸೂಕ್ಷ್ಮ ವಿಚಾರ. ಈ ಬಗ್ಗೆ ಸರ್ಕಾರದ ತಜ್ಞರು ಈ ಬಗ್ಗೆ ಪರೀಕ್ಷೆ ನಡೆಸಬೇಕು.

ಜಲಸಂಪನ್ಮೂಲ ಇಲಾಖೆ ಇದೆ, ನೀರಾವರಿ ತಜ್ಞರಿದ್ದಾರೆ ಅವರು ನೋಡಿಕೊಳ್ತಾರೆ ಎಂದರು.

ತಜ್ಞರು ಕೂಡಾ ಯಾವುದೇ ಬಿರುಕಿಲ್ಲ ಅಂತ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ರಾಜಕೀಯವಾಗಿ ಮಾತನಾಡಬಾರದು.

ಆಣೆಕಟ್ಟು ವಿವಾದದಲ್ಲಿ ಅಂಬರೀಶ್ ಸಾವಿನ ಪ್ರಸ್ತಾಪ ವಿಚಾರ ಸರಿಯಲ್ಲ. ‘ದಟ್ ಇಸ್ ವೆರಿ ಅನ್ ಫಾರ್ಚುನೇಟ್’ ಅಂಬರೀಶ್ ಯಾವ ಪಕ್ಷದಲ್ಲಿದ್ರೂ ಎಲ್ಲರ ಜೊತೆ ಚೆನ್ನಾಗಿದ್ರು. ಅವರ ಹೆಸರನ್ನು ಮಧ್ಯೆ ತಂದು ರಾಜಕಾರಣ ಮಾಡಬಾರದು ಎಂದುಮೈಸೂರಿನಲ್ಲಿ ಶಾಸಕ ಎನ್.ಮಹೇಶ್ ಹೇಳಿದರು.

ಕಾರ್ಯಕರ್ತನಿಗೆ ಡಿಕೆಶಿ ಕಪಾಳಮೋಕ್ಷ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಚುನಾವಣೆ ಬಂದಾಗ ಕಾರ್ಯಕರ್ತರ ಕಾಲು ಹಿಡಿದುಕೊಳ್ಳುತ್ತಿರಾ. ಈಗ ಹೊಡೆಯೋದು ಸರಿಯಲ್ಲ. ಕಾರ್ಯಕರ್ತರು ಪ್ರೀತಿ ವಿಶ್ವಾಸದಿಂದ ಬರ್ತಾರೆ. ಅಂತವರನ್ನ ಪ್ರೀತಿಯಿಂದ ಕಾಣಬೇಕು. ಈ ರೀತಿ ವರ್ತಿಸೋದು ಸರಿಯಲ್ಲ ಎಂದರು.