ಕೆ.ಆರ್.ಪೇಟೆ ತಾಲ್ಲೂಕನ್ನು ಮಾದರಿ ಶಿಕಾರಿಪುರವನ್ನಾಗಿ ಮಾಡಲು ಶ್ರಮಿಸುತ್ತೇನೆ-ಸಚಿವ ಡಾ.ನಾರಾಯಣ್ ಗೌಡ ಭರವಸೆ…

ಮಂಡ್ಯ,ಸೆಪ್ಟಂಬರ್,11,2020(www.justkannada.in):  ಕೆ.ಆರ್.ಪೇಟೆ ತಾಲ್ಲೂಕನ್ನು ಮಾದರಿ ಶಿಕಾರಿಪುರ ವನ್ನಾಗಿ ಮಾಡಲು ನಾನು ಶ್ರಮಿಸುತ್ತೇನೆ ಹಾಗೂ ತಾಲ್ಲೂಕಿನ ಸರ್ವತೋಮುಖ ಬೆಳವಣಿಗೆಗಾಗಿ ದುಡಿಯುತ್ತೇನೆ ಮತ್ತು ಸದಾಕಾಲವೂ ನಿಮ್ಮ ಸೇವಕನಾಗಿ ಇರುತ್ತೇನೆ ಎಂದು  ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣ್ ಗೌಡ ಅವರು ಹೇಳಿದರು.kr-pete-taluk-model-shikaripura-minister-narayan-gowda

ಇಂದು ಸಂತೇಬಾಚಹಳ್ಳಿ ಗ್ರಾಮದಲ್ಲಿ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳ ಹೋಬಳಿ ಮಟ್ಟದ ಮನೆ ಬಾಗಿಲಿಗೆ ಸರ್ಕಾರ ಹಾಗೂ ಕಂದಾಯ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ನಾರಾಯಣಗೌಡ  ನಮ್ಮ ಸರ್ಕಾರ ನಿಮ್ಮ ಮನೆ ಮನೆಗಳಿಗೆ ಬಂದಿದೆ. ಎಲ್ಲರ ಅಭಿವೃದ್ಧಿಯೇ ನಮ್ಮ ಸರ್ಕಾರದ ಉದ್ದೇಶವಾಗಿದ್ದು ಕುಡಿಯುವ ನೀರಾವರಿ ಯೋಜನೆಗೆ ಸುಮಾರು 666 ಕೋಟಿ ಮತ್ತು ಕೆ.ಆರ್.ಪೇಟೆ ತಾಲ್ಲೂಕಿಗೆ ಸುಮಾರು 1000 ಕೋಟಿ ಅನುದಾನವನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.kr-pete-taluk-model-shikaripura-minister-narayan-gowda

ನಮ್ಮ  ಗ್ರಾಮದಲ್ಲಿ ಒಟ್ಟು ಸುಮಾರು 1100 ಪಿಂಚಣಿ ಅರ್ಜಿಗಳನ್ನು ಸ್ವೀಕರಿಸಿ ಅದರಲ್ಲಿ ಸುಮಾರು 200 ಆರ್.ಟಿ.ಸಿ ಸಮಸ್ಯೆಗಳನ್ನು ಬಗೆ ಹರಿಸಿಲಾಗಿದೆ ಎಂದು ಅವರು ಹೇಳಿದರು.

ನಂತರ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್,  ಸ್ಥಳದಲ್ಲೇ ಜನರಿಗೆ ಪಿಂಚಣಿ ಸಮಸ್ಯೆ ಆರ್.ಟಿ.ಸಿ ಸಮಸ್ಯೆ, ಆಕಾರದ ಬಂದ್ ಮತ್ತು ಭಾಗ್ಯಲಕ್ಷ್ಮಿ ಬಾಂಡ್ ಗಳನ್ನು ವಿತರಣೆ ಮಾಡಲು ಸಚಿವರು ಮತ್ತು ಅಧಿಕಾರಿಗಳು ಇಂತಹ ಕೋವಿಡ್ ಸಮಯದಲ್ಲಿ ಈ ರೀತಿಯಲ್ಲಿ ಕಾರ್ಯಕ್ರಮವನ್ನು ಮಾಡಿ ಜನ ಸಾಮಾನ್ಯರಿಗೆ ಕೈಗೆಟುಕುವ ಹಾಗೆ ಮಾಡಿ ಮನೆ ಮನೆಗೆ ಮನೆ ಬಾಗಿಲಿಗೆ ಬಂದಿದೆ ಎಂದು ಹೇಳಿದರು. ಪಶುಪಾಲನಾ ಮತ್ತು ವೈದ್ಯಕೀಯ ಸೇವ ಇಲಾಖೆ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ, ಕಾರ್ಮಿಕ ಇಲಾಖೆ,  ಕೃಷಿ ಮತ್ತು ತೋಟಗಾರಿಕೆ ಇಲಾಖೆಯ, ಕಂದಾಯ ಇಲಾಖೆ, ಸರ್ವೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ಜಲಸಂಪನ್ಮೊಲ ಇಲಾಖೆ ಮತ್ತು ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಹಾಗೂ ಇತರ ಇಲಾಖೆಯ ವತಿಯಿಂದ ರೈತರ ಎಲ್ಲ ಸಮಸ್ಯೆಗಳನ್ನು ಸ್ಥಳದಲ್ಲೇ  ಪರಿಶೀಲಿಸಿ ಸ್ಥಳದಲ್ಲೇ ಬಗೆಹರಿಸಿದರು.

ಈ ಸಂದರ್ಭದಲ್ಲಿ ನಗರ ಸಭೆ ಆಯುಕ್ತರು, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ನ ಅಧ್ಯಕ್ಷರು ಮತ್ತು ಐಕ್ಯಟ್ ಡಾ.ಶಾಲಿನಿ  ಇತರ ಅಧಿಕಾರಿಗಳು,  ಉಪಸ್ಥಿತರಿದ್ದರು.

Key words: KR Pete- Taluk- model-shikaripura-Minister -Narayan Gowda