ಬೆಂಕಿ  ತಗುಲಿದ ಪರಿಣಾಮ ಕಬ್ಬಿನಗದ್ದೆ ಸುಟ್ಟು ಭಸ್ಮ….

ಕೆ.ಆರ್.ಪೇಟೆ,ಡಿ,11,2019(www.justkannada.in): ವಿದ್ಯುತ್ ಸರ್ಕೂಟ್ ನಿಂದ ಬೆಂಕಿ ತಗುಲಿ  ಕಬ್ಬಿನ ಕದ್ದೆ ಸುಟ್ಟು ಭಸ್ಮವಾಗಿರುವ ಘಟನೆ ಮಂಡ್ಯ ಜಿಲ್ಲೆ ಕೆ.ಆರ್ ಪೇಟೆ ತಾಲ್ಲೂಕಿನಲ್ಲಿ ನಡೆದಿದೆ

ಕೆ.ಆರ್ ಪೇಟೆ ತಾಲ್ಲೂಕು ಕಿಕ್ಕೇರಿ ಹೊಬಳಿ ಚಿಕ್ಕಳಲೆ ಗ್ರಾಮದಲ್ಲಿ ಈ ಘಟನೆ ಡನೆದಿದೆ.  ಗ್ರಾಮದ ಶಿವಲಿಂಗೆಗೌಡs/o ನಿಂಗೆಗೌಡ ಎಂಬುವವರ ಜಮೀನು ಸುಮಾರು ಸರ್ವೆನಂ:129/1 ಒಂದು ಎಕರೆ ಕಬ್ಬಿನಗದ್ದೆ ವಿದ್ಯುತ್ ಸರ್ಕೂಟ್ ನಿಂದ ಬೆಂಕಿ ತಗುಲಿ ಸುಟ್ಟು ಭಸ್ಮ ವಾಗಿದೆ.

ಸ್ಥಳಕ್ಕೆ ದೌಡಯಿಸಿದ ಗ್ರಾಮಸ್ಥರುಯ ಬೆಂಕಿ ನಂದಿಸಲು ಹರಸಾಹಸ ಪಟ್ಟು ವಿಫಲವಾದರು. ಇನ್ನು ತಡವಾಗಿ ಬಂದ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಿದರೂ ಅಷ್ಟರಲ್ಲೇ ಬೆಂಕಿಗೆ ಕಬ್ಬಿನಗದ್ದೆ ಸಂಪೂರ್ಣ ಆಹುತಿಯಾಗಿತ್ತು

Key words: kr pet-effect – fire- burning- Sugarcane