ಕಾಂಗ್ರೆಸ್ ಶಾಸಕರ ರಾಜೀನಾಮೆ ಶುದ್ಧ ಸುಳ್ಳು: ರಾಜ್ಯ ಬಿಜೆಪಿ ಸರ್ಕಾರದಲ್ಲಿ ಇಬ್ಬರು ಮುಖ್ಯಮಂತ್ರಿಗಳಿದ್ದಾರೆಂದ ಮಾಜಿ ಸಿಎಂ ಸಿದ್ಧರಾಮಯ್ಯ…

ಕೊಪ್ಪಳ,ಜೂ,3,2020(www.justkannada.in): ರಾಜ್ಯ ಬಿಜೆಪಿ ಸರ್ಕಾರದಲ್ಲಿ ಇಬ್ಬರು ಮುಖ್ಯಮಂತ್ರಿಗಳಿದ್ದಾರೆ. ಒಂದು ಸಂವಿಧಾನಾತ್ಮಕವಾಗಿ ಬಿಎಸ್ ವೈ, ಅಸಂವಿಧಾನಾತ್ಮಕ ಮುಖ್ಯಮಂತ್ರಿಯಾಗಿ ವಿಜಯೇಂದ್ರ ಇದ್ದಾರೆ. ಈಗಂತ ಜನ ಹೇಳ್ತಾರೆ, ನಾವಲ್ಲ. ಯಡಿಯೂರಪ್ಪ ಹೆಸರಿಗಷ್ಟೇ ಸಿಎಂ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಲೇವಡಿ ಮಾಡಿದರು.

ಕೊಪ್ಪಳದಲ್ಲಿ ಇಂದು ಮಾಧ್ಯಮದ ಜತೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸತ್ತುಹೋಗಿದೆ.  ಬಿಜೆಪಿ ಸರ್ಕಾರದಲ್ಲಿ ಇಬ್ಬರು ಮುಖ್ಯಮಂತ್ರಿಗಳಿದ್ದಾರೆ. ಒಂದು ಸಂವಿಧಾನಾತ್ಮಕವಾಗಿ ಬಿಎಸ್ ವೈ, ಇನ್ನೊಬ್ಬರು ಅಸಂವಿಧಾನಾತ್ಮಕವಾಗಿ ಇದ್ದಾರೆ. ವಿಜಯೇಂದ್ರ ಮತ್ತೊಬ್ಬ ಮುಖ್ಯಮಂತ್ರಿಯಾಗಿದ್ದಾರೆ. ರಾಜ್ಯದಲ್ಲಿ ಸರ್ಕಾರವೇ ಇಲ್ಲ ಬಿಎಸ್ ವೈ ಮುಖ್ಯಮಂತ್ರಿಯಾಗಿ 10 ತಿಂಗಳಾಗಿದೆ ಹೊಸಕಾರ್ಯಕ್ರಮ ಜಾರಿ ಮಾಡಿಲ್ಲ. ಅವರ ಸಾಧನೆ ಏನು…?  ಎಂದು ಪ್ರಶ್ನಿಸಿದರು.koppal-former-cm-siddaramaiah-two-chief-ministers-state-bjp-government

ಹಾಗೆಯೇ ಬಿಜೆಪಿಯಲ್ಲಿ ಭಿನ್ನಮತವಿರುವುದು ಸತ್ಯ. ಬಿಜೆಪಿಯಲ್ಲಿ ಭಿನ್ನಮತ ಮುಂದುವರೆಯುತ್ತದೆ ಅದರಲ್ಲಿ ನಾವು ಕೈ ಹಾಕಲ್ಲ ಎಂದು ತಿಳಿಸಿದ ಸಿದ್ಧರಾಮಯ್ಯ, ಕಾಂಗ್ರೆಸ್ ಶಾಸಕರು  ರಾಜೀನಾಮೆ  ನೀಡುತ್ತಾರೆಂಬ ವಿಚಾರ ಶುದ್ಧ ಸುಳ್ಳು ಭಿನ್ನಮತ ಡೈವರ್ಟ್ ಮಾಡಲು ಬಿಜೆಪಿಯವರು ಈ ರೀತಿ ಹೇಳಿದ್ದಾರೆ ಎಂದು ಕಿಡಿಕಾರಿದರು.

Key words: koppal-Former CM- Siddaramaiah,  two- chief ministers – state -BJP government.