ಪಾನಮತ್ತ ವ್ಯಕ್ತಿಯಿಂದ ಮನೆಗೆ ಬೆಂಕಿ: 6 ಮಂದಿ ಸಜೀವ ದಹನ…

ಕೊಡಗು,ಏಪ್ರಿಲ್ ,3,2021(www.justkannada.in):  ಪಾನಮತ್ತ ವ್ಯಕ್ತಿಯೊಬ್ಬ ಮನೆಯ ಬಾಗಿಲು ಹಾಕಿ ಬೆಂಕಿ ಹಚ್ಚಿದ ಪರಿಣಾಮ ಆರು ಮಂದಿ ಸಜೀವದಹನವಾಗಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.Illegally,Sand,carrying,Truck,Seized,arrest,driver

ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಕಾನೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸೀತೆ (46), ಬೇಬಿ (40) ಹಾಗೂ ಪ್ರಾರ್ಥನಾ (6) ಸಜೀವ ದಹನವಾದವರು. ಇನ್ನು ವಿಶ್ವಾಸ್,  ಪ್ರಕಾಶ್, ವಿಶ್ವಾಸ್ ಮೂವರು ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.kodagu-home-fire-drunken-man-6-people-burned

ಎರವರ ಬೋಜ ಎಂಬಾತನೇ ಈ ಕೃತ್ಯವೆಸಗಿರುವುದು. ಕುಡಿದ ಮತ್ತಿನಲ್ಲಿ ಮನೆಯ ಬಾಗಿಲು ಹಾಕಿ  ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಈ ಕುರಿತು ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: kodagu- Home- fire -drunken man- 6 people -burned