ಪ್ರಾಣಿ ದಯಾ ಸಂಘಟನೆಗೆ ನೆರವು ನೀಡಿ ಎಲ್ಲರ ಮನಗೆದ್ದ ಕೆ.ಎಲ್.ರಾಹುಲ್

ಮುಂಬಯಿ, ಜನವರಿ 25, 2019 (www.justkannada.in): ಕ್ರಿಕೆಟಿಗ ಕೆ.ಎಲ್‌. ರಾಹುಲ್‌ ಪ್ರಾಣಿ ದಯಾ ಸಂಘಟನೆಯ ಕಾರ್ಯಕರ್ತ ಶ್ರವಣ್‌ ಕೃಷ್ಣನ್‌ ಎಂಬವರಿಗೆ 2 ಲಕ್ಷ ರೂ. ದೇಣಿಗೆ ನೀಡಿದ್ದಾರೆ.

ಮುಂದಿನ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದಾಗ ಸಿಗುವ ಹಣವನ್ನು ಕೊಡುವುದಾಗಿ ಶ್ರವಣ್‌ಗೆ ರಾಹುಲ್‌ ವಾಗ್ಧಾನ ಮಾಡಿದ್ದರು. ಅದರಂತೆ ಜ. 17ರಂದು ಆಸ್ಟ್ರೇಲಿಯ ವಿರುದ್ಧದ ಏಕದಿನ ಪಂದ್ಯದಲ್ಲಿ ರಾಹುಲ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಈ ಸಂದರ್ಭದಲ್ಲಿ ಲಭಿಸಿದ ಒಂದು ಲಕ್ಷ ರೂ.ಗೆ ಇನ್ನೂ ಒಂದು ಲಕ್ಷ ರೂ. ಸೇರಿಸಿ ಶ್ರವಣ್‌ ಕೃಷ್ಣನ್‌ಗೆ ಕೊಟ್ಟು ಮಾತು ಉಳಿಸಿಕೊಂಡಿದ್ದಾರೆ. ಈ ಮೂಲಕ ಮೈದಾನದಲ್ಲಿ ಮಾತ್ರವಲ್ಲದೆ ಮೈದಾನದ ಹೊರಗೂ ಜನರ ಮನ ಗೆಲ್ಲುವಂಥ ಕೆಲಸ ಮಾಡಿದ್ದಾರೆ.