4 ಕೋಟಿಗೂ ಹೆಚ್ಚು ಜನರನ್ನು ತಲುಪಿದ ಬಿಟಿಎಸ್ , 5000 ಕೋಟಿ ಬಂಡವಾಳ ನಿರೀಕ್ಷೆ : ಡಾ. ಅಶ್ವಥ್ ನಾರಾಯಣ್

 

ಬೆಂಗಳೂರು, ನ.19, 2021 : ( www.justkannada.in news ) ಎಚ್ ಸಿಎಲ್, ಅಪ್ಲೈಡ್ ಮೆಟೀರಿಯಲ್, ರಾಕಾನ್ ಮತ್ತು  ಚಿಂಟ್ ಕಂಪನಿಗಳು ರಾಜ್ಯದಲ್ಲಿ ಒಟ್ಟು 5 ಸಾವಿರ ಕೋಟಿ ರೂ.ಗಿಂತಲೂ ಅಧಿಕ ಬಂಡವಾಳ ಹೂಡಲು ಮುಂದೆ ಬಂದಿವೆ. ಈ ಹೂಡಿಕೆಯಿಂದಾಗಿ ರಾಜ್ಯದಲ್ಲಿ 15 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ ಆಗಲಿದೆ ಎಂದು ಐಟಿ- ಬಿಟಿ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಹೇಳಿದರು.

ರಾಜ್ಯದಲ್ಲಿ ಈ ಕಂಪನಿಗಳ ಹೂಡಿಕೆಯಿಂದಾಗಿ ಸೆಮಿಕಂಡಕ್ಟರ್, ಎಲೆಕ್ಟ್ರಾನಿಕ್, ಸೌರ ಕೋಶಗಳು, ವಾಶಿಂಗ್ ಮಶೀನ್ ಮತ್ತು ಹವಾ ನಿಯಂತ್ರಕಗಳಿಗೆ ಅಳವಡಿಸುವ ಮೋಟಾರುಗಳ ಉತ್ಪಾದನೆ ಸಾಧ್ಯವಾಗಲಿದೆ ಎಂದು ಸಚಿವರು ಹೇಳಿದರು.

4 ಕೋಟಿಗೂ ಹೆಚ್ಚು ಜನರನ್ನು ತಲುಪಿದ ಬಿಟಿಎಸ್

ವರ್ಷದಿಂದ ವರ್ಷಕ್ಕೆ ವಿಸ್ತಾರವಾಗುತ್ತಿರುವ ‘ಬೆಂಗಳೂರು ತಂತ್ರಜ್ಞಾನ ಶೃಂಗ’ದ 24ನೇ ಆವೃತ್ತಿಯು ಒಟ್ಟಾರೆ 4 ಕೋಟಿಗೂ ಹೆಚ್ಚು ಜನರನ್ನು ತಲುಪಿದೆ ಎಂದು ಐಟಿ/ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ  ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾಮಾಜಿಕ ಜಾಲತಾಣ ಮತ್ತು ಡಿಜಿಟಲ್‌ ಮಾಧ್ಯಮಗಳ ಮೂಲಕ 2.93 ಕೋಟಿ ಜನರನ್ನು ತಲುಪಲಾಗಿದ್ದರೆ ಮುಖ್ಯಧಾರೆಯ ಮಾಧ್ಯಮಗಳ ಮೂಲಕ  98.10 ಲಕ್ಷ ಜನರಿಗೆ ತಲುಪಲಾಗಿದೆ. 1.45 ಕೋಟಿ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಅವರು ಹೇಳಿದರು.


ಇದೇ ಸಂದರ್ಭದಲ್ಲಿ 16 ಸಾವಿರ ಬಿಸಿನೆಸ್ ಮೀಟಿಂಗ್ ಗಳು ಆಗಿವೆ 26,863 ವಾಣಿಜ್ಯ ಪ್ರತಿನಿಧಿಗಳು ನೋಂದಣಿ ಮಾಡಿಸಿಕೊಂಡಿದ್ದರು ಎಂದು ಅವರು ವಿವರಿಸಿದರು. ಒಟ್ಟಾರೆ ಕಳೆದ ವರ್ಷಕ್ಕಿಂತ ಹೆಚ್ವು‌ ಮಂದಿ ಈ ಬಾರಿಯ ಶೃಂಗದಲ್ಲಿ. ಭಾಗವಹಿಸಿದ್ದಾರೆ ಎಂದರು.

ಪ್ರಮುಖ ಅಂಶಗಳು
ಜಿಐಎ ಪಾಲುದಾರಿಕೆ 48  ದೇಶಗಳು,
1,253 ನಿಯೋಗಗಳು,
3 ಸಚಿವರ ಮಟ್ಟದ ನಿಯೋಗಗಳು,
8 ಒಡಂಬಡಿಕೆ ಘೋಷಣೆ

key words : karnataka-bangalore-tech-summit-dr.ashwath.narayan-meeting