ಕೊರೊನಾ ಸಂಕಷ್ಟ ಕಾಲದಲ್ಲಿ ಕರ್ನಾಟಕದ ನೆರವಿಗೆ ಬಂದ ಕಪಿಲ್ ಶರ್ಮಾ, ಭೂಮಿ ಪಡ್ನೇಕರ್

kannada t-shirts

ಬೆಂಗಳೂರು, ಮೇ 28, 2021 (www.justkannada.in): ಬಾಲಿವುಡ್ ನಟಿ ಭೂಮಿ ಪಡ್ನೇಕರ್ ಮತ್ತು ಕಾಮಿಡಿ ಸ್ಟಾರ್ ಕಪಿಲ್ ಶರ್ಮಾ ಒಟ್ಟಾಗಿ ಕರ್ನಾಟಕದ ನೆರವಿಗೆ ಧಾವಿಸಿದ್ದಾರೆ.

ಕೊರೊನಾ ರೋಗಿಗಳ ಸಹಾಯ ನಿಂತಿರುವ ಭೂಮಿ ಮತ್ತು ಕಪಿಲ್ ಈಗ ಕರ್ನಾಟಕದ ಕಡೆ ಧಾವಿಸಿದ್ದಾರೆ.

ಶ್ರೀ ರವಿಶಂಕರ್ ಅವರ ಮಿಷನ್ ಜಿಂದಗಿ ಯೊಂದಿಗೆ ಈ ಇಬ್ಬರೂ ಸ್ಟಾರ್ ಗಳು ಕೈ ಜೋಡಿಸಿದ್ದಾರೆ. ಕರ್ನಾಟಕದ ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಳ ಸೇರಿದಂತೆ ಇನ್ನು ಕೆಲವು ಆಸ್ಪತ್ರೆಗಳಿಗೆ ಅಕ್ಸಿಜನ್ ಬಸ್ ಗಳನ್ನು ಕಳುಹಿಸಿದ್ದಾರೆ.

ಸದ್ಯ ಕರ್ನಾಟಕ ಜನರ ನೆರವಿಗೆ ಬಂದಿದ್ದೇವೆ. ಈ ಸೇವೆ ಎಲ್ಲಾ ರಾಜ್ಯಗಳಿಗೂ ಮುಂದು ವರೆಸಲು ಪ್ರಯತ್ನ ಮಾಡುತ್ತಿದ್ದೇವೆ ಎಂದು ಭೂಮಿ ಪಡ್ನೇಕರ್ ಹೇಳಿದ್ದಾರೆ.

website developers in mysore